ಕಲಬುರಗಿ :ಜೆಸ್ಕಾಂ ಜಿಲ್ಲಾಧಿಕಾರಿಗಳು ಹಾಗೂ ತಾಲೂಕ ಜೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ಚಿಂಚೋಳಿ ಹಾಗೂ ಕಾಳಗಿ ವ್ಯಾಪ್ತಿಯಲ್ಲಿರುವ ಎಲ್ಲಾ ತೋಟದ ಮನೆಗಳಿಗೆ ಹಾಗೂ ಜಮೀನುಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಸರ್ಕಾರದ ಆದೇಶದಂತೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ರಾಜ್ಯ ರೈತ ಸಂಘದ ಹಾಗೂ ರೈತ ಸೇನೆ ತಾಲೂಕ ಅಧ್ಯಕ್ಷರು ವೀರಣ್ಣ ಗಂಗಾಣಿ ಒತ್ತಾಯಿಸಿದರು.
ಜೆಸ್ಕಾಂ ಕಛೇರಿ ಎದುರು ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಸರ್ಕಾರ ಆದೇಶದಂತೆ ತೋಟದ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವಂತೆ ಜೆಸ್ಕಾ ಎಇಇ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಜೆಸ್ಕಾಂ ವ್ಯಾಪ್ತಿಯಲ್ಲಿ ರೈತರು ತೋಟದಲ್ಲಿ ನಿರ್ಮಿಸಿರುವ ಹಲವಾರು ಮನೆಗಳಿವೆ, ಜಮೀನಿನಲ್ಲಿ ಹಾಗೂ ಗ್ರಾಮದಿಂದ ದೂರ ಇರುವ ಹೊಲಗಳಲ್ಲಿ ನಿರ್ಮಿಸಿದ ಮನೆಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ವಾಸಿಸುತ್ತಿರುವಂತ ರೈತರಿಗೆ, ರೈತನ ಮಕ್ಕಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ.
ಕತ್ತಲಲ್ಲಿ ವಿಷಜಂತು ಹಾವುಗಳು, ಚೇಳುಗಳು ಕಾಡು ಪ್ರಾಣಿಗಳಿಂದ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಹೀಗೆ ಹಲವಾರು ರೀತಿಯಲ್ಲಿ ತೊಂದರೆಯಾಗುತ್ತಿದೆ. ಆದ ಕಾರಣ ಈಗಾಗಲೇ ಸರಕಾರದ ರೈತರ ಬಗ್ಗೆ ಕಾಳಜಿ ವಹಿಸಿ ಜನವರಿಯಿಂದಲೇ ರೈತರಿಗೆ ವಿದ್ಯುತ್ ಸರಬರಾಜು ಮಾಡುವಂತೆ ಆದೇಶ ಹೊರಡಿಸಲಾಗಿದೆ. ಆದ್ದರಿಂದ ವಿಳಂಬ ನೀತಿ ಅನುಸರಿಸದೇ ಬೇಗನೆ, ಅತಿ ತುರ್ತಾಗಿ ಅಧಿಕಾರಿಗಳನ್ನು ನೇಮಿಸಿ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಕೆ. ಎಂ. ಬಾರಿ ಶಿವರಾಜ್ ಪಾಟೀಲ್ ಗೋಣಗಿ, ರಾಜಕುಮಾರ್ ತಳವಾರ್, ಕಿರಣ ಮಡಿವಾಳ, ನಾಯಕ ರೈತ ಮುಖಂಡರು ಇತರರು ಇದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್
