ಕೊಪ್ಪಳ/ ಯಲಬುರ್ಗಾ: ೧೧ ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷವಾಕ್ಯದೊಂದಿಗೆ ಯೋಗ ದಿನಾಚರಣೆ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಜರುಗಿತು.
ಕಪ್ಪತ್ತಗುಡ್ಡದ ಓಂಕಾರೇಶ್ವರಿ ಮಾತಾಜಿ, ಬ್ರಹ್ಮಕುಮಾರಿ ಸಂಚಾಲಕಿ ಗೀತಾ ಅಕ್ಕನವರು , ಶರಣಬಸಪ್ಪ ದಾನಕೈ ಅವರು ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಬಸಪ್ಪ ಕಪ್ಪತ್ತಗುಡ್ಡ ಇವರು ಪ್ರಾರ್ಥಿಸಿದರು. ಸಿದ್ದಯ್ಯ ಕೊಣ್ಣೂರಮಠ, ಗೀತಾ ಸಂಶಿ, ಫಕೀರಪ್ಪ ಗಾಣಗೇರ, ರತ್ನಮ್ಮ ನಿಂಗೋಜಿ, ಎಸ್. ರವಿ, ಲಕ್ಷ್ಮೀ ಶ್ರೀಗಿರಿ, ಶಾರದಾ ಕೊಣ್ಣೂರಮಠ, ಶೈಲಾ ಪಾಟಿಲ ,ದೊಡ್ಡಬಸಪ್ಪ ಹಕಾರಿ, ಈರಮ್ಮ ಗದ್ದಿ, ವಿಜಯಲಕ್ಷ್ಮೀ ಜೀಗೇರಿ , ರತ್ನ ಕರಂಡಿ, ಅನ್ನಪೂರ್ಣ ಹಿರೇಕುರಬರ, ಶೋಭಾ ಶಿವಪ್ಪಯ್ಯನಮಠ, ನಜೀಮಾ, ಶಿವಮ್ಮ ಗಾಣಗೇರ ಸೇರಿದಂತೆ ಸರ್ವ ಸದಸ್ಯರು ಭಾಗವಹಿಸಿದ್ದರು.
- ಕರುನಾಡ ಕಂದ



















