
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಮದರ್ ಮುಜೀದ ಅಲ್ಪಸಂಖ್ಯಾತರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಉದ್ಘಾಟನೆಯನ್ನು ಶಾಸಕ ಎಂ. ಆರ್. ಮಂಜುನಾಥ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮದರ್ ಮುಜೀದ ಶಾಲೆಯ ಕಾರ್ಯದರ್ಶಿ ಅಂಜುಮ್ ಪಾಷಾ ಅವರು ಮಾತನಾಡಿ ಶಾಸಕರಾದ ಮಂಜುನಾಥ್ ಅವರು ನಮ್ಮ ಶಾಲೆಯ ಆಡಳಿತ ಕಚೇರಿಯ ಉದ್ಘಾಟನೆ ಮಾಡಿದ್ದು ತುಂಬಾ ಸಂತೋಷದ ವಿಷಯ ಮುಂದಿನ ದಿನಗಳಲ್ಲಿ ಮಾನ್ಯ ಶಾಸಕರ ಬೆನ್ನೆಲುಬಾಗಿ, ಅವರ ಹಿಂಬಾಲಕರಾಗಿ, ಸತತವಾಗಿ ಅವರ ಜೊತೆಗೂಡಿ ಟೊಂಕ ಕಟ್ಟಿ ನಿಲ್ಲುತ್ತೇವೆ ಹಾಗೆಯೇ ಮುಂದಿನ ಬಾರಿಯೂ ಇವರೇ ಶಾಸಕರಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಸೆಯಾಗಿದೆ, ನಿಮ್ಮ ಜೊತೆ ನಿಂತು ನಿಮಗೆ ಕೈಜೋಡಿಸುತ್ತೇವೆ ಎಂದರು.
ನಂತರ ಮಾತನಾಡಿದ ಮದರ್ ಮುಜೀದ ಶಾಲೆಯ ಅಧ್ಯಕ್ಷರಾದ ತಯೀಮ್ ಪಾಷಾ ಅವರು ಮಾತನಾಡಿ ನಮ್ಮ ಶಾಲೆಯು ಅಚ್ಚುಕಟ್ಟಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎನ್ನುವ ಆಸೆ ಇದೆ ಅದಕ್ಕೆ ಶಾಸಕರಾದ ಮಂಜುನಾಥ್ ಅವರ ಸಹಕಾರ ಅತ್ಯಗತ್ಯ ಇದೆ ನೀವು ನಮ್ಮ ಸಂಸ್ಥೆ ಬೆಳೆಯಲು ಸಹಕರಿಸಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ನಂತರ ಶಾಸಕರು ಮಾತನಾಡಿ ನನಗೆ ಮದರ್ ಮುಜೀದ ಶಾಲೆಯ ಆಡಳಿತ ಕಚೇರಿಯ ಕಟ್ಟಡ ಉದ್ಘಾಟನೆ ಮಾಡಲು ಆಹ್ವಾನ ಮಾಡಿದ್ದು ಸಂತಸದ ವಿಷಯ ಹಾಗೆಯೇ ಇದರ ಜೊತೆಗೆ ನೀವು ಮೂರು ಜನ ಅಣ್ಣ ತಮ್ಮಂದಿರು ಹಾಗೂ ಕುಟುಂಬದ ಸದಸ್ಯರು ಮುಂದಿನ ದಿನಗಳಲ್ಲಿ ನನಗೆ ಸಹಕಾರ ನೀಡುತ್ತೇವೆ ಎಂದಿದ್ದು ನನಗೆ ಆನೆ ಬಲ ಬಂದಂತಾಗಿದೆ ಎಂದರು.
ಈ ಸಂಧರ್ಭದಲ್ಲಿ ಮದರ್ ಮುಜೀದ ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ತಯೀಮ್ ಪಾಷಾ, ಕಾರ್ಯದರ್ಶಿ ಅಂಜುಮ್ ಪಾಷಾ, ಆಡಳಿತಾಧಿಕಾರಿ ಜಿಸೀಮ್ ಪಾಷ, ಫಾರುಖ್, ಪ್ರಾಂಶುಪಾಲರಾದ ಮುತ್ತುರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ತಮ್ಮಯ್ಯ ಹಾಗೂ ಮುಖಂಡರುಗಳಾದ ಸೈಯದ್ ಬಶರತ್, ರಾಹೀಲ್, ಹನೂರು ಗೋವಿಂದ, ಮೊಹಮದ್ ರಫೀಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















