ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

102 KG ಭಾರದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ 61ರ ಭಕ್ತ

ಕೊಪ್ಪಳ/ ಗಂಗಾವತಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಹನ್ನೂರು ಗ್ರಾಮದ ನಿಂಗಪ್ಪ ಸವಣೂರು ಎನ್ನುವ 61 ವರ್ಷದ ವ್ಯಕ್ತಿ 102 ಕೆಜಿ ತೂಕದ ಜೋಳದ ಮೂಟೆ ಬೆನ್ನ ಮೇಲೆ ಹೊತ್ತು ಮಂಗಳವಾರ 575 ಮೆಟ್ಟಿಲುಗಳು ಇರುವ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ ಬೆಟ್ಟದ ಕೆಳಭಾಗದಲ್ಲಿರುವ ಪಾದಗಟ್ಟಿಗೆ ನಮಸ್ಕರಿಸಿ ಮೂಟೆ ಹೊತ್ತ ನಿಂಗಪ್ಪ ಎಲ್ಲಿಯೂ ನಿಲ್ಲದೆ ಒಂದು ತಾಸು ಎರಡು ನಿಮಿಷದಲ್ಲಿ ಶ್ರೀರಾಮ ಹಾಗೂ ಹನುಮನ ಸ್ಮರಣೆ ಮಾಡುತ್ತಾ ಬೆಟ್ಟ ಏರಿದರು. ನಂತರ ಜೋಳವನ್ನು ದೇವಸ್ಥಾನಕ್ಕೆ ಅರ್ಪಿಸಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿಂಗಪ್ಪ ಹಿಂದೆ ಶ್ರೀಶೈಲದಿಂದ ಅಂಜನಾದ್ರಿಗೆ ಬಂದಾಗ ಜೋಳದ ಮೂಟೆ ಹೊತ್ತು ಮುಂದೊಂದು ದಿನ ಬೆಟ್ಟ ಏರುವುದಾಗಿ ಹರಕ್ಕೆ ಕಟ್ಟಿಕೊಂಡಿದ್ದೆ ಈಗ ಆ ಬೇಡಿಕೆ ಈಡೇರಿದೆ ದೇವರು ಆರೋಗ್ಯ ಚೆನ್ನಾಗಿ ಇಟ್ಟಿರುವುದರಿಂದಲೇ ಬೆಟ್ಟ ಏರಲು ಸಾಧ್ಯವಾಗಿದೆ ಎಂದು ಭಕ್ತಿಯಿಂದ ಹರ್ಷ ವ್ಯಕ್ತಪಡಿಸಿದರು.

ವರದಿ : ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!