ದೇವ ಕೊಟ್ಟ ಉಡುಗೊರೆ
ಭಾವ ತುಂಬಿದ ಅರಮನೆ
ನವ ನವೀನ ಮಾದರಿ
ಹಳತು ಹೊಸತು ಸಮ್ಮಿಲನ
ಅನುಭವದ ಸದನ.
ಜೀವ ವೀಣೆ ಮೀಟಿದೆ
ಹಾವ ಭಾವ ಲಹರಿ ಮೂಡಿಸಿ
ಒಳಗಣ್ಣ ತೆರೆ ಒಮ್ಮೆ
ಮೇಲ್ಪದರ ಮಾಸಿದರು
ಅಂತರಂಗದ ಅರಿವಿರಲಿ.
ಆನು ತಾನಾದ ಬಳಿಕ
ಅನುವಾದದ ಬಳುವಳಿ
ತಿರುಳು ತಿಳಿದು
ಒಳ ರಸವ ಹೀರಿ
ನೋಟಕೆ ಮಾರು ಹೋಗದೆ.
ಸೃಷ್ಟಿ ನಿಯಮಕೆ ಓಗೊಟ್ಟು
ದೃಷ್ಟಿ ಬದಲಿಸದೆ
ಸಮಸ್ಥಿತಿಯಲಿ ನಡೆ
ಬಂದು ಹೋಗುವ ದಾರಿ ಸಹಜ
ಆವಕಾಶ ಬಾಚಿ ತಬ್ಬಿಕೋ.
ಅತ್ಮ ಸುಖಿಯಾಗು
ಚಿತ್ತ ಶುದ್ಧಿಯಲಿ
ಬಿತ್ತಿದಂತೆ ಬೆಳೆಯುವೆ
ಕೊಳೆಯ ತೊಡೆದು
ಸುಂದರ ಮಾಡಿಕೋ.
ಪರಮಾತ್ಮನ ನೆನೆ
ಕೊಟ್ಟ ಉಡುಗೊರೆಯ
ಒಪ್ಪ ಓರಣ ಮಾಡಿಕೋ
ತೆರೆದು ನೋಡೋಮ್ಮೆ
ಬರಿದು ಬದುಕಲಿ ಚಿಗುರಿ ಬೆಳೆಯಲಿ.
- ರೇಷ್ಮಾ ಕಂದಕೂರ, ಶಿಕ್ಷಕಿ




















