ವೇದವ್ಯಾಸರಿಂದ ಪ್ರತಿಷ್ಠಿತವಾದ ಪುರಾತನ ಆಂಜನೇಯ ದೇಗುಲ – ಸ್ಥಳೀಯರಿಂದ ನಿರ್ಲಕ್ಷ್ಯ
ಯಾದಗಿರಿ/ಗುರುಮಠಕಲ್: ಪಟ್ಟಣದ ಶ್ರೀ ತಿಮ್ಮಪ್ಪ ದೇವಸ್ಥಾನದ 3 ನೇಯ ವರ್ಷದ ಜಯಂತೋತ್ಸವ ಇಂದು ವೈಭವದಿಂದ ಜರುಗಿತು.
ವೇದವ್ಯಾಸರಿಂದ ಪ್ರತಿಷ್ಠಿತವಾಗಿದೆ ಎನ್ನಲಾದ ಆಂಜನೇಯ ಸ್ವಾಮಿ ವಿಗ್ರಹ ಉಳ್ಳ ತಿಮ್ಮಪ್ಪ ದೇವಸ್ಥಾನ ಸುಮಾರು ವರ್ಷಗಳ ಇತಿಹಾಸ
ಹೊಂದಿದೆ, ಸತತ ಮೂರು ವರ್ಷಗಳಿಂದ ಇಲ್ಲಿನ ಯುವಕರು ಸೇರಿ ಜಯಂತಿಯನ್ನು ಸಂಭ್ರಮ, ಸಡಗರ, ಶ್ರದ್ಧಾ– ಭಕ್ತಿಯಿಂದ ಆಚರಿಸುತ್ತಿದ್ದಾರೆ.
ದೇವಸ್ಥಾನಗಳನ್ನು ತಳಿರು– ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನಗಳಿಗೆ ಬೆಳಿಗ್ಗೆಯಿಂದಲೇ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿ, ವಿವಿಧ ಕಾಣಿಕೆಗಳನ್ನು ಅರ್ಪಿಸಿದರು.
ಹನುಮಾನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಸುಕಿನ ಜಾವ ಪ್ರಾತಃ ಸುಪ್ರಭಾತ, ಪಂಚಾಮೃತ ಅಭಿಷೇಕ, ಮಹಾಪೂಜೆ, ಹನುಮಾನ ಚಾಲೀಸಾ ಪಠಣ, ಸೇರಿದಂತೆ ನಾನಾ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ತುಂತುರು ಮಳೆ ಮಧ್ಯದಲ್ಲಿ ಕುಟುಂಬ ಸಮೇತರಾಗಿ ಬಂದ ಭಕ್ತರು ದೇವಸ್ಥಾನಗಳ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನದಲ್ಲಿ ಬಂದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ದೇವಸ್ಥಾನದ ಯುವಕರ ಬಳಗ ಮಾಡಿದ್ದರು.
ಸ್ಥಳೀಯರಿಂದ ನಿರ್ಲಕ್ಷ್ಯ ಒಳಗಾಗಿರುವ ಈ ದೇವಸ್ಥಾನ ಸಾಯಂಕಾಲ ವಾಗುತ್ತಿದ್ದಂತೆ ಮದ್ಯಪಾನಿಗಳು ಹಾಗೂ ದೇವಸ್ಥಾನದ ಮುಂಭಾಗದ ಬಾವಿಯಲ್ಲಿ ಜನ ಕಸ ಹಾಕುತ್ತಿರುವದು, ದೇವಸ್ಥಾನದ ಸುತ್ತಮುತ್ತಲಿನ ಆವರಣ ಸ್ವಚ್ಚತೆ ಕಡೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ನೀಡಬೇಕು ಈ ಸಮಸ್ಯೆಯಿಂದ ಭಕ್ತರ ಸಂಖ್ಯೆ ತೀರ ಕಡಿಮೆಯಾಗಿದೆ ಎಂದು ದೇವಸ್ಥಾನ ಯುವಕರ ಬಳಗ ಅಭಿಪ್ರಾಯ ಪಟ್ಟರು.
ವರದಿ: ಜಗದೀಶ್ ಕುಮಾರ್ ಭೂಮಾ



















