ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವಾತಂತ್ರ್ಯ -ಸ್ವಾತಂತ್ರ!.

ಆಚರಿಸುತ್ತಿದ್ದೇವೆ ನಾವು
ಎಪ್ಪತ್ತೊಂಬತ್ತನೆಯ
ಸ್ವಾತಂತ್ರ್ಯ ದಿನೋತ್ಸವ,

ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮ
ಅಸ್ತ್ರಗಳು,

ಪಡೆದೆವು ನಾವು
ಅಂತೂ ಸ್ವಾತಂತ್ರ್ಯ,
ಕಳೆದುಕೊಂಡೆವು ಸ್ವತಂತ್ರ!

ಸ್ವಾತಂತ್ರ್ಯವೆಂದರೇನು?
ತಿಳಿದೆವು ನಾವು ಸ್ವೇಚ್ಛಾಚಾರ
ಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ!

ಸ್ವಾತಂತ್ರ್ಯ ಸಿಕ್ಕಿತೆಂದು
ಸಂತೋಷ ಪಡೋಣವೇ,
ಸ್ವತಂತ್ರ ಕಳೆದುಕೊಂಡೆವೆಂದು
ದುಃಖಿಸೋಣವೇ?

ಏರುತಿದೆ ನೋಡಿಲ್ಲಿ ಧ್ವಜ,
ಕೇಸರಿ, ಬಿಳಿ, ಹಸಿರು,
ವರ್ಣಗಳಲಿ, ಬಾನೆತ್ತರ.

ಏರುತಿದೆ ನೋಡಿಲ್ಲಿ ಸಂಖ್ಯೆ,
ಇದು ಭಾರತದ ಜನಸಂಖ್ಯೆ,
ದಿನೆ ದಿನೇ ಕೋಟ್ಯಾಂತರ!

ನಾವು ಎಷ್ಟು ಮುಂದುವರಿದಿದ್ದೇವೆ
ಅಂದರೆ, ಸಂವಿಧಾನ ಬದಲಿಸುವಷ್ಟು!
ಸಾಧ್ಯವಾದಷ್ಟು ತಿರುಚುವಷ್ಟು!

ನಮಗೆ ಸ್ವಾತಂತ್ರ್ಯ ಬಂದಿದೆ,
ಎಲ್ಲದಕ್ಕೂ ನಮಗೆ ಸ್ವಾತಂತ್ರ
ಇದೆ, ಎಲ್ಲೆಡೆಯಲ್ಲೂ ಇದೇ ಮಾತು, ಇದೇ ಕತೆ!

ನಾವೀಗ ಆಚರಿಸುತ್ತಿದ್ದೇವೆ,
ಎಪ್ಪತ್ತೊಂಬತ್ತನೆಯ ಸ್ವಾತಂತ್ರ್ಯ
ದಿನೋತ್ಸವ, ಸಂಭ್ರಮದಿಂದ,
ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದೇ,
ತಲೆ ತಗ್ಗಿಸಲೇಬೇಕಾಗಿದೆ ದುಃಖದಿಂದ!…

  • ಶಿವಪ್ರಸಾದ್ ಹಾದಿಮನಿ.
    ಕೊಪ್ಪಳ.583231.
    ಮೊಬೈಲ್ ಸಂಖ್ಯೆ.
    7996790189.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!