ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಜ ದೈವ ವೀರಭದ್ರ

ಭದ್ರಕಾಳಿ ಪತಿಯೇ ಶ್ರೀ ವೀರಭದ್ರನೆ
ಶ್ರೀ ನಿಡಗಲ್ಲು ಕ್ಷೇತ್ರದಲಿ ನೆಲೆಸಿಹನೆ
ನಂಬಿ ಬಂದ ಭಕ್ತರನು ಸಲಹುವವನೆ
ಜಗದ ಒಡೆಯ ನೀನು ನಿಜ ದೇವನೆ.

ನೊಂದು ಬಂದಿರುವೆ ವರವ ಬೇಡುತ
ಕಡು ಕಷ್ಟಗಳ ದೂರ ದೂಡು ಎನ್ನುತ
ನಂಬಿ ಬಂದಿಹೆನು ನನ್ನ ಹರಕೆ ಕೇಳುತ
ಭಕ್ತಿಯಿಂದ ಬೇಡುವೆ ಕರ ಮುಗಿಯುತ

ಮನ್ನಿಸೆನ್ನ ಮಾಡಿದ ಕರ್ಮದ ಪಾಪವ
ತೊಲಗಿಸೆನ್ನ ಮೇಲಿನ ಕೋಪ ತಾಪವ
ಸಂತೈಸುತ ಹರಸೆನಗೆ ಒಳ್ಳೆಯ ತನವ
ಬಿಡದೆ ತೋರುವೆನು ಭಕ್ತಿಯ ಭಾವವ.

ಅಜ್ಞಾನವೆಂಬ ಕತ್ತಲೆಯಲ್ಲಿ ನೊಂದು
ಸುಜ್ಞಾನ ಇಲ್ಲದೆ ಅಂಧಕಾರದಿ ಬೆಂದು
ಸದ್ಗತಿ ಬೇಡುತ ನಿನ್ನ ಕಾಣಲು ಬಂದು
ಶಿರಬಾಗಿ ನಿಂತಿಹೆನು ಶರಣಾಗಲೆಂದು.

ನಿಷ್ಠೆಯಿಂದ ಮಾಡುತಿರುವೆ ನನ್ನ ಕಾಯಕ
ನೆರಳಾಗುತ ನೀ ನಿಂತು ಕಾಪಾಡುವ ರಕ್ಷಕ
ಈ ಸೃಷ್ಟಿಯ ರಹಸ್ಯಕ್ಕೆ ನೀ ತಾನೇ ನಾಯಕ
ನೀ ಜೀವ ಕೊಟ್ಟು ಪೊರೆಯುವ ಜಗ ಪಾಲಕ.

  • ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
    ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
    ದೂರವಾಣಿ ಸಂಖ್ಯೆ: 9740199896.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!