ಬಳ್ಳಾರಿ / ಕಂಪ್ಲಿ: ಪಟ್ಟಣದ ಗಂಗಾನಗರದಲ್ಲಿ ಗಂಗಾಮತ ಸಮಾಜದಿಂದ ಶ್ರೀ ದೇವಮ್ಮ, ದುರ್ಗಮ್ಮ ದೇವಿಯ ಗಂಗೆಸ್ಥಳ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರದ್ಧ ಭಕ್ತಿಯಿಂದ ಜರುಗಿದವು.
ಇಲ್ಲಿನ ಕೋಟೆ ಪ್ರದೇಶದಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮಾರೆಮ್ಮ ದೇವಸ್ಥಾನವರೆಗೆ ಸಂಚರಿಸಿ, ಪುನಃ ಗಂಗಾನಗರದಲ್ಲಿರುವ ದೇವಿಗಳ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಸುಮಂಗಲಿಯರ ಕಳಸ, ಡೋಳ್ಳು, ಭಜನೆ, ಮಂಗಳವಾದ್ಯ ಸೇರಿ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗಂಗೆಸ್ಥಳ ಮತ್ತು ಪೂಜಾ ಕಾರ್ಯಕ್ರಮದ ಪ್ರಯುಕ್ತ ಇಲ್ಲಿನ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ಶ್ರದ್ಧೆಯಿಂದ ನೆರವೇರಿದವು. ಭಕ್ತರು ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ದೇವಿಯರ ಕೃಪೆಗೆ ಪಾತ್ರರಾದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪೂಜಾರಿಗಳಾದ ಹನುಮಂತ, ಬಿ.ರಾಘವೇಂದ್ರ, ಗಂಗಾಮತ ಸಮಾಜದ ಮುಖಂಡರಾದ ಬಿ.ವೀರಭದ್ರಪ್ಪ, ಯು.ವಿರುಪಣ್ಣ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಯು.ಹನುಮಂತಪ್ಪ, ಯು.ರಮೇಶ, ಎಲೆಗಾರ ನಾಗರಾಜ, ಜೋಳಮಾರು ಈರಪ್ಪ, ಬಿ.ರಮೇಶ, ಎನ್.ಚಂದ್ರಪ್ಪ, ಯು.ಪರಶುರಾಮ, ಯು.ಪರಮೇಶ, ಎಸ್.ಆನಂದ, ಎಲ್.ಗುರುರಾಜ, ಬಿ.ರಮೇಶ, ಎಸ್.ಸುರೇಶ, ಯು.ಶರಣ, ಯು.ಸಂತೋಷ, ನಿಂಬೆಹಣ್ಣುಬಸವರಾಜ, ಲಬೇದ್ ಗಂಗಣ್ಣ, ಯು.ವೆಂಕಟೇಶ, ಯು.ಮಲ್ಲಯ್ಯ, ಜೋಳಮಾರೋ ನಾಗರಾಜ, ಅರವಿಂದ, ಸಿರಗುಪ್ಪ ನಾರಾಯಣ, ಅಯ್ಯೋದಿ ರಮೇಶ ನಾಗರಾಜ, ಅಕ್ಕಿ ವಿರುಪಣ್ಣ, ಇಟಗಿ ಈರಣ್ಣ, ಎನ್.ವಿರೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















