ಕೊಪ್ಪಳ/ ಕುಷ್ಟಗಿ ತಾಲೂಕಿನ ಕೊಪ್ಪಳ ಜಿಲ್ಲೆಯ ಕಿಲಾರಹಟ್ಟಿ ತಾಂಡಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜ್ಯೂ ಸ್ಟಾರ್ಸ್ ಕಬಡ್ಡಿ ಪಂದ್ಯಾವಳಿ ನಡೆಯಿತು ಈ ಸಂದರ್ಭದಲ್ಲಿ ಶ್ರೀ ಈಶಪ್ಪ ರಾಠೋಡ್, ಶ್ರೀ ಶ್ರೀನಿವಾಸ್ ನಾಯ್ಕ್, ಕೇಶಪ್ಪ ರಾಠೋಡ್, ಭೋಜ ನಾಯ್ಕ್, ವಾಯ್ಸ್ ಆಫ್ ಬಂಜಾರ ನಿರೂಪಕರು ಬಂಜಾರ ಭಾಷಾ ಗೋರ್ ಬೋಲಿ ಸಾಹಿತ್ಯ ಕಲಾ ವೆಲ್ ವೇಲ್ಡಿ ಪ್ರಧಾನ ಕಾರ್ಯದರ್ಶಿ ಶ್ರೀ ಗೋಪಾಲ ನಾಯ್ಕ್, ಹನಮಂತ ಚವ್ಹಾಣ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಜನಾರ್ಧನ್ ನಾಯ್ಕ್ ಹಾಜರಿದ್ದರು.
ಮೂರು ತಂಡಗಳು ಭಾಗವಸಿದ್ದವು ಜಗನ್ ಮಾಲೀಕತ್ವದ ತಾಂಡಾ ಬುಲ್ಸ್ ದ್ವಿತೀಯ ಸ್ಥಾನ ಪಡೆಯಿತು ಮಾರುತಿ ರಾಠೋಡ್ ಮಾಲೀಕತ್ವದ ತಾಂಡಾ ಸೂಪರ್ ಕಿಂಗ್ಸ್ ತೃತೀಯ ಸ್ಥಾನ ಪಡೆಯಿತು ಸೀತಾರಾಮ ಮಾಲೀಕತ್ವದ ಸ್ಟೈಲ್ ಕಿಂಗ್ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆದರು.
ಪ್ರಥಮ ಬಹುಮಾನ ಶ್ರೀ ಗೋಪಾಲ ನಾಯ್ಕ್ ನೀಡಿದ್ದರು ಹಾಗೂ ದ್ವಿತೀಯ ಬಹುಮಾನ ಶ್ರೀ ಹನಮಂತ ಚವ್ಹಾಣ ನೀಡಿದರು.
- ಕರುನಾಡ ಕಂದ



















