ಬಳ್ಳಾರಿ / ಕಂಪ್ಲಿ: 2025-2026ನೇ ಸಾಲಿನ ದಸರಾ ಕ್ರೀಡಾಕೂಟ ಪ್ರಯುಕ್ತ ಬಳ್ಳಾರಿ ನಗರರದ ಗಾಲಿ ರುಕ್ಮಿಣೆಮ್ಮ ಚೆಂಗರೆಡ್ಡಿ ವಾಣಿಜ್ಯ ಕಾಲೇಜು ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಆಯಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಇತ್ತೀಚೆಗೆ ಜರುಗಿತು.
ಈ ಕ್ರೀಡಾ ಕೂಟದಲ್ಲಿ ವಿವಿಧ ಬಗೆಯ ಕ್ರೀಡೆಗಳು ನಡೆದವು. ಜಿಲ್ಲಾ ಮಟ್ಟದ ಯೋಗಸನಾ ಸ್ಫರ್ಧೆಯಲ್ಲಿ ಕಂಪ್ಲಿಯ ಯಕ್ಷ ಯೋಗ ಆಕಾಡಮಿ ಕೇಂದ್ರದ ಮಕ್ಕಳು ಭಾಗವಹಿಸಿದ್ದವು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಯೋಗದಲ್ಲಿ ಕಂಪ್ಲಿಯ ಬಿ. ಎಂ. ಮಣಿಕಂಠ, ಎಸ್. ಭೂಮಿಕಾ, ಎಸ್. ಪೂಜಾ, ಎಸ್. ನವ್ಯ, ನಿತ್ಯಶ್ರೀ ಇವರು ಪ್ರಥಮ ಸ್ಥಾನ ಪಡೆಯುವ ಮೂಲಕ ಬೀದರನಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕರ್ನಾಟಕ ಯೋಗಸನಾ ಕ್ರೀಡಾ ಅಧ್ಯಕ್ಷ ಎಂ.ಬಿ.ಮುದ್ದೆಗೌಡ, ಪದಾಧಿಕಾರಿಗಳಾದ ಸಂಜಯ್ಯಸ್ವಾಮಿ, ಅಂಜಿನಪ್ಪ, ಶಂಕರ ಯಾದವ, ಕಂಪ್ಲಿಯ ಯಕ್ಷ ಯೋಗ ಆಕಾಡಮಿ ಸಂಸ್ಥಾಪಕಿ ಎಂ.ಶಾಮಲಮ್ಮ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















