ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುತ್ತಮುತ್ತಲು ದೇವಸ್ಥಾನ ಹುಂಡಿಗಳು, ಕುರಿ ಮೇಕೆ ಹಾಗೂ ನಗದು ಕಳವು ಆಗಿದೆ ಹಾಗೆಯೇ ಕಳೆದ ಒಂದು ತಿಂಗಳಿನಲ್ಲಿ ಎರಡು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿದ್ದು, ಇದರ ವಿರುದ್ಧ ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ತಡರಾತ್ರಿ ಅಜ್ಜಿಪುರ – ಹನೂರು ಮಾರ್ಗದಲ್ಲಿರುವ ಶ್ರೀ ಕಣಿವೆ ಆಂಜನೇಯ ಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ. ಇದೇ ತರಹ , ಸುಮಾರು 15 ದಿನಗಳ ಹಿಂದೆ ದೊಡ್ಡಲತ್ತೂರು ಗ್ರಾಮದ ಮಾರಮ್ಮನ ದೇವಾಲಯದಲ್ಲಿಯೂ ಕಳ್ಳತನ ನಡೆದಿತ್ತು. ಆದರೆ ಈವರೆಗೂ ಯಾವುದೇ ಆರೋಪಿಗಳ ಪತ್ತೆಯಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಇದೆಲ್ಲವೊಂದೆ ಕಡೆ, ರೈತರ ಜಮೀನಿನಲ್ಲಿ ಕೇಬಲ್ ಕಳುವು, ಮೇಕೆಗಳ ಕಳವು ಕೂಡ ನೆಡೆದಿದೆ ಎನ್ನಲಾಗಿದೆ ಇದ್ದರಿಂದ ಗ್ರಾಮೀಣ ಜನರು ಭೀತಿಯಿಂದಿದ್ದಾರೆ.
ಆದ್ದರಿಂದ ಪೊಲೀಸ್ ಇಲಾಖೆಯು ಇದರ ಬಗ್ಗೆ ಸೂಕ್ತ ಕ್ರಮ ತೆಗೆದು ರೈತರಿಗೆ ಅನುಕೂಲ ಮಾಡಿ ಕೊಡಬೇಕು ಹಾಗೆಯೇ ಈ ಕಳ್ಳತನ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದು ಕಳ್ಳರಿಗೆ ಶಿಕ್ಷೆ ಕೊಡಬೇಕೆಂದು ರೈತ ಸಂಘಟನೆಯ ಅಧ್ಯಕ್ಷ ಅಮ್ಜದ್ ಖಾನ್ ಮನವಿ ಮಾಡಿದ್ದಾರೆ.
ವರದಿ: ಉಸ್ಮಾನ್ ಖಾನ್




















