ಬಳ್ಳಾರಿ / ಕಂಪ್ಲಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಸುಮಾರು 26.78.435 ರೂ. ಗಳ ನಿವ್ವಳ ಲಾಭಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಬಿ.ಕಾಸೀಂಸಾಬು ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಹಕರು ಸಂಘದೊಡನೆ ವ್ಯವಹರಿಸುವ ಮೂಲಕ ಉತ್ತಮ ವ್ಯವಹಾರಿಕ ಬಾಂಧವ್ಯ ಬೆಳೆಸಿಕೊಳ್ಳಬೇಕು, ಸಂಘವು ರೈತರ ಅನುಕೂಲಕ್ಕಾಗಿ ಶ್ರಮಿಸುತ್ತಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಇ.ಜಡೇಶರೆಡ್ಡಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ, 3894 ಸದಸ್ಯರನ್ನೊಂದಿದು 124.45 ಲಕ್ಷ ರೂಪಾಯಿಗಳ ಷೇರು ಬಂಡವಾಳ ಹೊಂದಿದೆ. 220.01 ಲಕ್ಷ ರೂಪಾಯಿಗಳ ಠೇವಣಿ ಸಂಗ್ರಹಿಸಿದೆ. 52.22 ಲಕ್ಷ ವ್ಯಾಪಾರ ನಡೆಸಿ, 14.96 ಲಕ್ಷ ರೂಪಾಯಿಗಳ ವ್ಯಾಪಾರಿ ಲಾಭ ಹೊಂದಿದೆ. ಒಟ್ಟಾರೆಯಾಗಿ ಸಂಘವು ಸುಮಾರು 26.78.435 ರೂ.ಗಳ ನಿವ್ವಳ ಲಾಭ ಹೊಂದಿದೆ ಎಂದರು.
ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ ಜಿಲ್ಲಾ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಗ್ರಾ. ಪಂ. ಅಧ್ಯಕ್ಷ ಹೆಚ್.ಜೆ.ಶಾರದಾ, ಸಂಘದ ಉಪಾಧ್ಯಕ್ಷ ಸಿದ್ದಮ್ಮನಹಳ್ಳಿ ಅಲ್ಲಾಸಾಬ್, ನಿರ್ದೇಶಕರಾದ ಬಿ. ಮಹೇಶಗೌಡ, ಎಚ್.ಪಕ್ಕೀರಪ್ಪ, ಕೆ.ಶೇಖರಪ್ಪ, ಎನ್.ಅಮರೇಶ, ಜೀರ್ ಉಮಾಪತಿ, ನೆಲ್ಲುಡಿ ರಾಜಸಾಬ್, ದೇವರಮನೆ ರಂಜಾನ್ಸಾಬ್, ಟಿ.ರಾಮು, ತಿಪ್ಪಮ್ಮ, ಕೆ.ಗಂಗಮ್ಮ, ಎ.ಕಿಶೋರಕುಮಾರ, ಕೆ.ಚಂದ್ರಶೇಖರ, ಮುಖಂಡರಾದ ಸದಾಶಿವಪ್ಪ, ವಡ್ರು ವಿರೇಶ ಸೇರಿದಂತೆ ಗ್ರಾಮಸ್ಥರು ಹಾಗೂ ಸಂಘದ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















