ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಗಣತಿಯಲ್ಲಿ ಧರ್ಮದಲ್ಲಿ ‘ಹಿಂದೂ’ ಜಾತಿಯಲ್ಲಿ ‘ಹಡಪದ’ ಎಂದು ನಮೂದಿಸಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕರೆ‌


ಕಲಬುರಗಿ : ರಾಜ್ಯ ಸರಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಜನಗಣತಿ ಸಮೀಕ್ಷೆಯ ಜಾತಿ ಕೋಡ್ ಸಂಖ್ಯೆ- 0445 ಇದ್ದು ಇದರಲ್ಲಿ ಹಡಪದ ಸಮಾಜದ ಧರ್ಮ ಕಲಂನಲ್ಲಿ ‘ಹಿಂದೂ’, ಜಾತಿ ಕಾಲಂನಲ್ಲಿ ‘ಹಡಪದ’ ಎಂದು ನಮೂದಿಸುವಂತೆ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಂಘದ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಅವರು ಕರೆ ನೀಡಿದರು.
ಅವರು ಕಲಬುರಗಿ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಂಘದಿಂದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕುರಿತು ಕಲಬುರಗಿ ಜಿಲ್ಲೆಗಳ ಹಡಪದ ಅಪ್ಪಣ್ಣ ಸಂಘದ ವತಿಯಿಂದ ಜನತೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ಅತೀ ತುರ್ತಾಗಿ ಸಮಾಜದ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರುಗಳು ತಮ್ಮ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಭೆ ನಡೆಸಿ ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಹಡಪದ ಅಪ್ಪಣ್ಣ ಸಮಾಜದವರು ರಾಜ್ಯದಲ್ಲಿ ಸುಮಾರು 12 ರಿಂದ 14 ಲಕ್ಷ ಜನಸಂಖ್ಯೆಯಲ್ಲಿದ್ದಾರೆ. ಆದರೆ ಹಿಂದಿನ ಜಾತಿ ಗಣತಿ ಸಮೀಕ್ಷೆಯಲ್ಲಿ ಹಡಪದ ಸಮಾಜದ ಜನ ಸಂಖ್ಯೆಯನ್ನು ಕೇವಲ ೧ ಲಕ್ಷ ೬೨ ಸಾವಿರ ಎಂದು ನಮೂದಿಸಲಾಗಿತ್ತು ಆದರೆ ಕಲಬುರಗಿ ಜಿಲ್ಲೆಯಲ್ಲಿಯೇ ಸುಮಾರು ೬೦ರಿಂದ ೭೦ ಸಾವಿರ ಜನಸಂಖ್ಯೆ ಹಡಪದ ಜನಾಂಗದ ಮತದಾರರಿದ್ದಾರೆ. ಆದ್ದರಿಂದ ಸರ್ಕಾರ ಹಡಪದ ಜನಾಂಗವನ್ನು ಕುಲ ಜಾತಿಗಳ ಹೆಸರಿನಲ್ಲಿ ಒಡೆಯಬಾರದು, ಹಡಪದ ಸಮಾಜಕ್ಕೆ ಆಗಿರುವ ಅನ್ಯಾಯ ಮತ್ತು ನೋವನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಈ ಜಾತಿ ಗಣತಿಯಲ್ಲಿ ಹಡಪದ ಜನಾಂಗದವರು ಯಾವುದೇ ಉಪ ಜಾತಿ(ಪಂಗಡಗಳು) ನಮೂದಿಸದೇ ‘ಜಾತಿ – ಹಡಪದ ಮತ್ತು ಉಪಜಾತಿ-ಹಡಪದ, ಧರ್ಮ -ಹಿಂದೂ ಮತ್ತು ಭಾಷೆ -ಕನ್ನಡ ಎಂದು ನಮೂದಿಸಿ, ಸಮಾಜದ ಬಂಧುಗಳು ಸಮಾಜದ ಹಿರಿಯ ಮುಖಂಡರು. ಮತ್ತು ಹಡಪದ ಅಪ್ಪಣ್ಣ ಸಮಾಜದ ನೌಕರಸ್ಥರು , ಕಾಯಕ ಬಂಧುಗಳು, ಯಾವುದೇ ಗೊಂದಲದ ಸುದ್ದಿಗಳಿಗೆ ಕಿವಿ ಕೊಡದೆ (ಹಾಕದೇ) ಇಡೀ ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಈ ಕೆಲಸ ಮಾಡಬೇಕು. ಹಡಪದ ಅಪ್ಪಣ್ಣ ಸಮುದಾಯದಲ್ಲಿ ಈಗಾಗಲೇ ಸಮುದಾಯದ ಪೂಜ್ಯರಾದ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಮಹಾಸ್ವಾಮಿಗಳ ಹಾಗೂ ರಾಜ್ಯದ ಸಮಸ್ತ ಜಿಲ್ಲಾಧ್ಯಕ್ಷರ ಮತ್ತು ಅನೇಕ ತಾಲೂಕು ಅಧ್ಯಕ್ಷರ ಹಾಗೂ ಸಮಾಜದ ಹಿರಿಯರು , ಮಾರ್ಗದರ್ಶಕರು, ಮಹಿಳಾ ತಾಯಂದಿರು, ಯುವಕ ಮಿತ್ರರು ಶ್ರೀಮಠದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಾಗಿ ನಾವೆಲ್ಲರೂ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸೋಣ ಎಂದು ಶಪಥ ಮಾಡಿದರು. ಈಗ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಯಾವುದೇ ಕಾರಣಕ್ಕೂ ಧರ್ಮದ ಕಾಲಂನಲ್ಲಿ ಬೇರಾವುದನ್ನು ಬರೆಸಬಾರದು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳು ಶ್ರೀ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!