ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಸೂರು ದಸರಾ ಪ್ರಚುರ ಕವಿಗೋಷ್ಠಿಗೆ ಆರ್.ಪಿ.ಮಂಜುನಾಥ್.ಬಿ.ಜಿ. ದಿನ್ನೆ ಆಯ್ಕೆ

ಬಳ್ಳಾರಿ: ಸಿರುಗುಪ್ಪ ಕನ್ನಡ ಸಾಹಿತ್ಯ ಲೋಕದಲ್ಲಿ ‘ಪ್ರೀತಿಯ ಮಂಜು’ ಎಂಬ ಕಾವ್ಯನಾಮದೊಂದಿಗೆ ಗುರುತಿಸಿಕೊಂಡಿರುವ ‘ ಆರ್.ಪಿ‌.ಮಂಜುನಾಥ್. ಬಿ‌.ಜಿ.ದಿನ್ನೆ’ ಯವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಗಾಮದಿನ್ನೆ ಎಂಬ ಕರ್ನಾಟಕಾಂಧ್ರದ ಗಡಿಗ್ರಾಮದವರು. ರಂಗನಟ ಆರ್‌. ಪ್ರಕಾಶಗೌಡ ಮತ್ತು ಅನ್ನಪೂರ್ಣಮ್ಮ ಮಗನಾಗಿರುವ ಇವರು ತಮ್ಮ ೧೬ನೇ ವಯಸ್ಸಿನಿಂದಲೇ ಕವಿತೆಗಳ ರಚನೆಗೆ ತೊಡಗಿದ್ದಾರೆ. ನಾಟಕಾಭಿನಯ, ರಂಗ ಸಂಶೋಧನೆ ಮತ್ತು ಕಥೆ, ಕವಿತೆ, ನಾಟಕ ರಚನೆಯಲ್ಲಿ ತೊಡಗಿರುವ ಇವರು ಇಲ್ಲಿಯವರೆಗೆ ” ತೋಚಿದ್ದೆ ಗೀಚಿದೆ, ಪ್ರೀತಿ ಜೋಳಿಗೆ ಫಕೀರ, ಕಾರಂತ ರತ್ನ ಕುಡುದರಹಾಳ್ ಡಾ. ಶಿವಕುಮಾರ ತಾತನವರ ವಚನಗಳು, ಯಪ್ಪ ತಿಪ್ಪನ ನುಡಿಗಳು, ಕೈಗೋಲು ” ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಇವರ ರಂಗಭೂಮಿ ಮತ್ತು ಸಾಹಿತ್ಯ ಸೇವೆಗೆ ಕನ್ನಡ ಪುಸ್ತಕ ಪ್ರಾಧಿಕಾರವು ೨೦೧೬ರಲ್ಲಿ ಇವರ ತೋಚಿದ್ದೆ ಗೀಚಿದೆ ಮೊದಲ ಕವನ ಸಂಕಲನಕ್ಕೆ ‘ಉದಯೋನ್ಮುಖ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರ’ ಹಾಗೂ ಧಾರವಾಡದ ಕನಕ ಸಂಸ್ಕೃತಿ ಪ್ರಕಾಶನವು ‘ಕನಕಶ್ರೀ ಪ್ರಶಸ್ತಿ’, ದೆಹಲಿಯಲ್ಲಿ ನಡೆದ ೮ನೇ ಥಿಯೇಟರ್ ಒಲಂಪಿಕ್ ಭಾಗವಹಿಸಿ ಜನಮನ್ನಣೆ ಪಡೆದುದಕ್ಕಾಗಿ ನೆಲಸೊಗಡು ಸಂಸ್ಥೆಯ ‘ಕಲಾ ಕುಸುಮ’, ಕನಕಶ್ರೀ ಪ್ರಶಸ್ತಿ ಲಭಿಸಿದೆ.
ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಾಗೇಶ್ ವಿ ಬೆಟ್ಟಕೋಟೆಯವರ ಮಾರ್ಗದರ್ಶನದಲ್ಲಿ ‘ರಂಗಭೂಮಿ : ಗಡಿನಾಡು ರಂಗಕಲಾವಿದರು (ಬಳ್ಳಾರಿ-ಕರ್ನೂಲ್ ಜಿಲ್ಲೆ ಅನುಲಕ್ಷಿಸಿ)’ ಎಂಬ ವಿಷಯದ ಕುರಿತು ಪಿ.ಎಚ್ ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಇದಲ್ಲದೇ ರಾಜ್ಯದ ಹಲವು ಸಾಹಿತ್ಯ ಉತ್ಸವಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿರುವ ಇವರು ಈ ವರ್ಷ ಮೈಸೂರಿನ ಪ್ರಚುರ ಕವಿಗೋಷ್ಠಿಗೆ ಆಯ್ಕೆಯಾಗುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!