ಬಳ್ಳಾರಿ/ ಕಂಪ್ಲಿ : ಶಿಕ್ಷಣ ಹಂತದಲ್ಲಿ ಸಿಕ್ಕ ಸಮಯ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಕ್ಕಿ ಗಿರಿಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ಚಾಮಿ ಹೇಳಿದರು.
ಪಟ್ಟಣದ ಬಿವೈಎಸ್ ಗಾರ್ಡ್ನ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಮದರ್ ತೆರೇಸಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ಬಿ.ಎ, ಬಿ.ಕಾಂ ಮತ್ತು ಪಿಯುಸಿ ವಿದ್ಯಾರ್ಥಿನಿಯರ ಸ್ವಾಗತ – ಸಮಾರಂಭ ಸಂಗಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಸ್ವತಂತ್ರರಾಗಿ ಸಾಗುವಂತೆ ಮಾಡುವುದೇ ಶಿಕ್ಷಣ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಮಾಜಕ್ಕೆ ಪೂರಕವಾಗುವಂತೆ ವಿದ್ಯಾರ್ಜನೆ ಮಾಡಬೇಕು’. ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮ ಸಂಸ್ಕಾರ ಕಲಿತು ಪಾಲಕರ ಹೆಸರನ್ನು ಉಳಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಪಾಲಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಸಾಲಸೋಲ ಮಾಡಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಹಾಗಾಗಿ ನೀವು ಅವರ ನಂಬಿಕೆಗೆ ಯಾವುದೇ ಕಪ್ಪು ಚುಕ್ಕಿ ಬಾರದಂತೆ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ನಿರ್ಮಾಣವಾಗಿ ಪಾಲಕರಿಗೆ ಹೆಸರು ತರಬೇಕು. ಇಲ್ಲಿನ ಪಿಯುಸಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದ್ದು, ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ವಿವಿಎಸ್ಎಸ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಇವರು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಜೀವನದಲ್ಲಿ ವಿದ್ಯೆಯೇ ದೊಡ್ಡದು. ಎಲ್ಲರ ಬಾಳನ್ನು ಸುಂದರ ಮಾಡುತ್ತದೆ. ವಿದ್ಯೆ ಕಲಿತರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಶಾಲೆಯಲ್ಲಿ ಒಂದು ಮಗುವಿಗೆ ಸಿಗಬೇಕಾದ ಶಿಸ್ತು, ವಿನಯ, ನಡೆ, ನುಡಿ ಕಲಿಸುವ ಬಗ್ಗೆ ಬಾಲಗಂಗಾಧರನಾಥ ಸ್ವಾಮೀಜಿಗಳು ಸಂಕಲ್ಪ ತೊಟ್ಟು ಎಲ್ಲ ಕಡೆ ಮಠದ ಶಾಖೆಗಳನ್ನು ತೆರೆಯುವ ಕೆಲಸ ಮಾಡಿದ್ದರು ಎಂದರು.
ಉಪನ್ಯಾಸಕ ಲಕ್ಷ್ಮಣನಾಯಕ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ತದನಂತರ ಸಮಾಜ ಸೇವಕಿ ಸುಗ್ಗೇನಹಳ್ಳಿ ರಾಜಮ್ಮ ಜೋಗತಿ ಇವರಿಗೆ ಸನ್ಮಾನಿಸಿ ಗೌರವಿಸಿದರು. ಮತ್ತು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವರಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ಜಗದೀಶ, ಪ್ರಾಚಾರ್ಯ ಮದ್ದಾನೆಪ್ಪ ಬಿಡನಾಳ, ಮಹಾಲಬಲೇಶ್ವರಪ್ಪ, ಸಿದ್ದಪ್ಪ ಪರಮೇಶ್ವರ, ಬಸವರಾಜಸ್ವಾಮಿ, ಬಸವರಾಜ ನಾಯಕ,
ಅಜೀಜ್ ವುಲ್ಲಾ, ಮುಖಂಡರಾದ ಗಿರಿನಾಥ ಶೆಟ್ಟಿ, ಬಡಿಗೇರ ಜಿಲಾನಸಾಬ್, ಜಿ.ಪ್ರಕಾಶ ನಾಯಕ, ಎನ್.ಬಾಲಪ್ಪ, ಅರ್ಜುನ್, ನಾಗರಾಜ, ತಿಪ್ಪೇಸ್ವಾಮಿ, ಯಮನಪ್ಪ, ಜಯಲಕ್ಷ್ಮಿ ಎನ್. ಬಾಲಪ್ಪ, ಉಪನ್ಯಾಸಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















