ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ನೂತನ ಅಂಜುಮನ್ ಇಸ್ಲಾಂ ಕಮೀಟಿ ರಚನೆ ಹಾಗೂ ಪದಗ್ರಹಣ ಸಮಾರಂಭ ಗ್ರಾಮದ ಅಲಿಮಸ್ಜೀದ್ ಪ್ರಾಂಗಣದಲ್ಲಿ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಜರುಗಿತು.
ಅಂಜುಮನ್ ಇಸ್ಲಾಂ ಕಮಿಟಿ ನೂತನ ಅಧ್ಯಕ್ಷರಾಗಿ ದಾವಲಸಾಬ್ ನದಾಫ್ ಹಾಗೂ ಉಪಾಧ್ಯಕ್ಷರಾಗಿ ಮೆಹಮೂದ್ ಕುಷ್ಟಗಿ (ಖಜಾಂಚಿ), ಅಲ್ತಾಫ್ ರಾಜೇಸಾಬ ನದಾಫ್ (ಕಾರ್ಯದರ್ಶಿ), ಪದಾಧಿಕಾರಿಗಳಾಗಿ ಖಾಜಾಮೈನುದ್ದೀನ್, ಸೈಯದ್ ಪೀರಜಾದೆ, ಹಸನಸಾಬ್ ಮುರಾಳ, ಹುಸೇನಸಾಬ್ ನಡುವಿನಮನಿ, ಇಬ್ರಾಹಿಂಸಾಬ್ ಕುಂಟೋಜಿ, ಅಮೀನಸಾಬ್ ಎಳಮೇಲಿ, ರಾಜೇಸಾಬ ಖಸಾಬ್, ದಾವಲಸಾಬ್ ನದಾಫ್, ರಫೀಕ್ ಮುರಾಳ ಆಯ್ಕೆಯಾದರು.
ನೂತನ ಕಮಿಟಿ ಸದಸ್ಯರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಮೌಲಾನ ಹಾಜೀಪೀರ್, ಅಲಿಪೀರ್ ಪೀರಜಾದೆ, ಖಾಜಾಮೈನುದ್ದೀನ ಪೀರಜಾದೆ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















