ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದ ಹತ್ತಿರದ ಬಂದೇನವಾಜ ವಾಡಿ ಗ್ರಾಮದ ಹತ್ತಿರ ಬಸವಕಲ್ಯಾಣ ಘಟಕಕ್ಕೆ ಸೇರಿದ ಕೆ.ಕೆ.ಆರ್.ಟಿ.ಸಿ. ಬಸ್ ಒಂದು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸವಕಲ್ಯಾಣದಿಂದ ಮುಡಬಿ ಕಡೆಗೆ ಹೋಗುತಿದ್ದ ವೇಳೆ ಬಂದೇನವಾಜ ವಾಡಿ ಹತ್ತಿರವಿರುವ ಗುಡ್ಡ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ನಿಂತಿದೆ. ಬಸ್ಸಿನಲ್ಲಿ ಸುಮಾರು ಜನ ಪ್ರಯಾಣಿಕರಿದ್ದು, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ವಾಹನ ಸವಾರರು ಹಾಗೂ ಬಸ್ಸಿನವರು ತಿರುವು ರಸ್ತೆ ಇರುವ ಜಾಗದಲ್ಲಿ ಅಥವಾ ವಾಹನಗಳಿಗೆ ಸೈಡ್ ಹೊಡೆಯುವಾಗ ಎಚ್ಚರ ವಹಿಸಿ ಚಾಲನೆ ಮಾಡಬೇಕೆಂದು ಬಸ್ಸಿನಲ್ಲಿರುವ ಪ್ರಯಾಣಿಕರು ಚರ್ಚೆ ಮಾಡುತ್ತಿದ್ದರು.
ವರದಿ : ಶ್ರೀನಿವಾಸ ಬಿರಾದಾರ



















