
ಕೊಪ್ಪಳ/ ಯಲಬುರ್ಗಾ: ಯುವ ಸಮುದಾಯ ಗುಟಕಾ, ಸಿಗರೇಟ್ , ಮದ್ಯಪಾನ ಇಂತಹ ದುಷ್ಟ ಚಟಗಳಿಗೆ ಅಂಟಿಕೊಂಡು ತಮ್ಮ ಬದುಕನ್ನು ಹಾಳುಮಾಡಿಕೊಳ್ಳದೆ ಉತ್ತಮರ ಸಂಘವನ್ನು ಮಾಡಬೇಕು ಎಂದು ಆರೋಗ್ಯ ಇಲಾಖೆಯ ಟಿ. ಕೃಷ್ಣಪ್ಪ ಅವರು ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದ ಗದಿಗೆಮ್ಮ ಬಳೂಟಗಿ ಪ್ರೌಢ ಶಾಲೆಯಲ್ಲಿ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಧರ್ಮಸ್ಥಳದ ಪೂಜ್ಯರು ೨೧ ನೆ ಪಟ್ಟಾಧಿಕಾರವನ್ನು ವಹಿಸಿಕೊಂಡು ಧಾರ್ಮಿಕ, ಸಮಾಜಮುಖಿ ಹಲವಾರು ಯೋಜನೆಗಳ ಮೂಲಕ ಬಡವರಿಗೆ ದಾರದೀಪವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಯೋಜನಾಧಿಕಾರಿ ಗಣೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರಿಗೆ ಬ್ಯಾಂಕಿನ ವ್ಯವಹಾರದ ಮಾಹಿತಿಯನ್ನು ನೀಡಿ ಅವರಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ ಎಂದು
ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯರಾದ ಶಕುಂತಲಾದೇವಿ ಮಾಲಿಪಾಟೀಲ ಮಾತನಾಡಿದರು. ಸಿಗರೇಟ್ ಧೂಮಪಾನ ಸೇವನೆಯಿಂದ ವಿಷ ಪಧಾರ್ಥಗಳು ನಮ್ಮ ಹೊಟ್ಟೆ ಸೇರಿ ನೂರು ವರ್ಷ ಬದುಕಿ ಬಾಳಬೇಕಾದವರು ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿ ನಮ್ಮ ಬದುಕು ಬೀದಿ ಪಾಲಾಗಿ ಹೋಗುತ್ತದೆ ಆದ್ದರಿಂದ ದುಷ್ಟ ಚಟಗಳನ್ನು ಬಿಟ್ಟು ಆರೋಗ್ಯವಂತರಾಗಬೇಕು, ಕೋಟಿ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ ,ಯುವ ಸಮುದಾಯ ಇದನ್ನು ಅರಿತುಕೊಂಡು ನಿಮ್ಮ ಪಾಲಕರಿಗೂ ಇದರ ಮಾಹಿತಿಯನ್ನು ನೀಡಬೇಕು ಸುಂದರ ಸಮಾಜ ಪರಿಸರ ನಿರ್ಮಿಸುವಲ್ಲಿ ನಿಮ್ಮ ಪಾತ್ರ ಮಹತ್ವವಾಗಿದೆ ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಮಾತನಾಡಿದರು. ಮುಖ್ಯಗುರು ನಾಗಭೂಷಣ ಚಿನಿವಾಲರ, ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತಪ್ಪ ಗೋಸಾವಿ, ಶಿಕ್ಷಕರಾದ ಶಿವಶಂಕರಯ್ಯ ಹಿರೇಮಠ, ಸಂಗಪ್ಪ ಸಂಗಳದ, ದೇವಪ್ಪ ಮುಗುಳಿ, ಮಲ್ಲನಗೌಡ್ರ ಎಂ.ಬಿ ಹಾಗೂ ಮುಖಂಡರಾದ ಅಶೋಕ ಕೋಳಿಹಾಳ, ಸುಭಾಷ ಕೊಂಗಿ, ಮಲ್ಲಿಕಾರ್ಜುನ ಎಂಟೆತ್ತಿನ, ಮೇಲ್ವಿಚಾರಕರಾದ ,ಈಶ್ವರ ಸಿ, ಸೇವಾ ಪ್ರತಿನಿಧಿ ರಾಜಾಭಕ್ಷಿ ಸೇರಿದಂತೆ ಸಿಬ್ಬಂದಿ ,ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ



















