ಬಳ್ಳಾರಿ / ಕಂಪ್ಲಿ : ಪಟ್ಟಣದ ಎಂ.ಡಿ.ಕ್ಯಾಂಪಿನ ಅಲೆಮಾರಿ ಗ್ರಂಥಾಲಯ ಆವರಣದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯ ಸೋಮವಾರ ನಡೆಯಿತು.
ಎಂ.ಡಿ.ಕ್ಯಾಂಪಿನ ಗ್ರಂಥಾಲಯ ಮೇಲ್ವಿಚಾರಕ ಎಚ್.ಪಿ.ಶಿಕಾರಿರಾಮು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಮೇಲ್ವಿಚಾರಕ ವೇತನ ಜಮೆ ಮಾಡಬೇಕು. ತಿಂಗಳ ವೃತ್ತಪತ್ರಿಕೆಗಳ ಬಿಲ್ಲನ್ನು 400ರೂಪಾಯಿಗಳಿಂದ 1000ರೂಪಾಯಿಗಳಿಗೇರಿಸಬೇಕು. ಕಂಪ್ಲಿ, ಹೊಸಪೇಟೆ, ಚಿಕ್ಕಮ್ಯಾಗಳಗೇರಿಗಳ ಅಲೆಮಾರಿ/ಕೊಳಚೆ ಗ್ರಂಥಾಲಯಗಳಿಗೆ ನಿವೇಶನ ನೀಡಿ, ಕಟ್ಟಡ ನಿರ್ಮಿಸಿ ಕೊಡಬೇಕು. ಮೇಲ್ವಿಚಾರಕರು ಮೃತರಾದಲ್ಲಿ ಅನುಕಂಪದ ಆಧಾರದಡಿ ಅವಲಂಬಿತರಿಗೆ ಮೇಲ್ವಿಚಾರಕ ಹುದ್ದೆ ನೀಡಬೇಕು. ಗ್ರಂಥಾಲಯ ಮೇಲ್ವಿಚಾರಕರನ್ನು ಖಾಯಂಗೊಳಿಸುವಂತೆ ಸೇರಿ ನಾನಾ ಬೇಡಿಕೆಗಳ ಕುರಿತು ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಗ್ರಂಥಾಲಯಗಳ ಕಾರ್ಯ ನಿರ್ವಹಣೆ, ಮೇಲ್ವಿಚಾರಕರ ಭವಿಷ್ಯ ನಿಧಿ ಸೇರಿ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು.
ಆಯ್ಕೆ: ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಲ್ಲಿಪುರದ ವಿ.ಹನುಮಪ್ಪ(ಅಧ್ಯಕ್ಷ), ಎಚ್.ಪಿ.ಶಿಕಾರಿರಾಮು(ಗೌರವಾಧ್ಯಕ್ಷ), ಹೊಸಪೇಟೆಯ ಪಕ್ಕೀರಪ್ಪ ಬಾದಗಿ (ಉಪಾಧ್ಯಕ್ಷ), ಬಳ್ಳಾರಿ ಗುಡಾರನಗರದ ಡಿ.ಸುಂಕಣ್ಣ (ಪ್ರಧಾನ ಕಾರ್ಯದರ್ಶಿ),
ಕುರುಗೋಡಿನ ಮಂಗಳಗೌರಿ (ಸಹ ಕಾರ್ಯದರ್ಶಿ), ಚಿಕ್ಕಮ್ಯಾಗಳಗೇರಿಯ ಡಿ.ಪರಶುರಾಮ (ಖಜಾಂಚಿ), ಕಂಪ್ಲಿಯ ಉಮೇಶ, ಸಿರುಗುಪ್ಪದ ವೈ.ದೇವೇಂದ್ರಪ್ಪ, ಬಳ್ಳಾರಿಯ ಉಮೇಶ (ಸದಸ್ಯರು), ವೈ.ದೇವೇಂದ್ರಪ್ಪ (ರಾಜ್ಯ ಮೇಲ್ವಿಚಾರಕ ಪ್ರತಿನಿಧಿ)ಆಯ್ಕೆಗೊಂಡರು. ಬಸವನಕುಂಟೆಯ ಉಮೇಶ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















