ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೀರ್ಷಿಕೆ : ಅನ್ನದಾತರು

ಸಮೃದ್ಧ ಭಾರತದ ಬೆನ್ನೆಲುಬು
ನಮ್ಮಅನ್ನದಾತರು
ವಿಶ್ವದಲ್ಲಿ ಜೀವಸಂಕುಲಕೆ ಅನ್ನ
ನೀಡುವ ಭೂಮಿಪುತ್ರರು//

ಕೋಟಿ ವಿದ್ಯೆಗಳಲಿ ಮೇಟಿವಿದ್ಯೆ
ಮೇಲೆಂದರು ಸರ್ವಜ್ಞ
ಕೃಷಿಕರ ಹೊಡೆದಾಟ ಹೋರಾಟ
ತಿಳಿದುಕೊ ಅಲ್ಪಜ್ಞ //

ಕೈಮುಗಿದು ಕೇಳಿಕೊಳ್ಳುತ್ತೇನೆ
ಆತ್ಮಹತ್ಯೆ ಸಲ್ಲದು
ಕಳಕಳಿಯ ವಿನಂತಿ ರೈತರಿಗೆ
ಆತ್ಮವಿಶ್ವಾಸ ಇರಲೆಂದು//

ಸರಕಾರದ ಸೌಕರ್ಯ ಸೌಲಭ್ಯ
ಉಪಯೋಗಿಸಿಕೊಳ್ಳಿ
ಹಸಿರು ಕ್ರಾಂತಿಯ ಅನ್ನದಾತರು
ಎಲ್ಲ ನಿಮ್ಮದಾಗಿಸಿಕೊಳ್ಳಿ//

ಮಳೆ ಇಳೆಗೆ ಹರಿದು ನದಿ ತುಂಬಿ
ಹಸುರಿನ ಪೈರು ಬಂದಾಗ
ಜೋಳ ಗೊಂಜಾಳ ತಲೆಬಾಗಿ
ಅನ್ನದಾತನ ಕರೆದಾಗ//

ಕರಿಯ ಎರಿಹೊಲ ಹೊನ್ನಿನಂತೆ
ಹೊಳೆದು ಬೆಳೆಬಂದಾಗ
ಇಳೆಯು ಮಳೆಮುತ್ತಿನ ಹನಿಗಳಿಗೆ
ಮುಗುಳ್ನಗುತ ನಾಚಿದಾಗ//

ರವಿ ರಶ್ಮಿಗಳಿಗೆ ವಸುಂಧರೆ ನಕ್ಕಾಗ
ತೆನೆ ಮುತ್ತಿನ ರಾಶಿಯಲ್ಲಿ
ಚಂದ್ರ ಶೀತಲತೆಯನು ಸುರಿಸಿದಾಗ
ಬೆಳೆದ ಪೈರು ತೋಷದಲ್ಲಿ//

ಸರ್ಜಾರಾಜಾ ಬಿಳಿ ಜೋಡೆತ್ತುಗಳ
ಗಂಟೆಗಳು ಬಾರಿಸುತಲಿ
ನೇಗಿಲಯೋಗಿ ಹಾಡುತ ಕೈಮುಗಿದು
ಬರುವ ತುಂಬಿದ ಬಂಡಿಯಲಿ//

ಕಾಯಕಯೋಗಿಯ ಕಾಯಕಕೆ
ನಾವೆಲ್ಲ ನಮಿಸುವೆವು
ಅನ್ನಪೂರ್ಣೆಯ ಪುತ್ರ ತಮಗೆ
ಕೃತಜ್ಞತೆ ಸಲ್ಲಿಸುವೆವು//

  • ಅನ್ನಪೂರ್ಣ ಸಕ್ರೋಜಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!