
ತುಮಕೂರು/ ಪಾವಗಡ : ಹೆಲ್ಪ್ ಸೊಸೈಟಿ ಹಾಗೂ ಸೇವಾ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಲುವಾಗಿ ಉತ್ಸಾಹದಿಂದ ವನಿತೆಯರಿಗೆ ರಂಗೋಲಿ ಸ್ಪರ್ಧೆಯು ಅಕ್ಷಯ ಬ್ಲೂ ಜೆಮ್ ಮಾಂಟೇಸರಿ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು.

ಮಹಿಳೆಯರು ರಂಗು ರಂಗಿನ ರಂಗೋಲಿ ಚಿತ್ರಗಳನ್ನು ಬಿಡಿಸಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರಕ್ಷಕ ವೃತ್ತ ನಿರೀಕ್ಷಕರಾದ ಸುರೇಶ್ ರವರು ಮಾತನಾಡಿ ಈ ತೆರೆನಾದ ಕಾರ್ಯಕ್ರಮಗಳನ್ನು ಹೆಲ್ಪ್ ಸೊಸೈಟಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ರಂಗೋಲಿಯನ್ನು ವೀಕ್ಷಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ, ಯುವ ರಾಜಕೀಯ ಮುಖಂಡ ಮೈಲಾರರೆಡ್ಡಿ, ಮಲ್ಲೇಶ್ ಮೋಟರ್ಸ್ ಶಶಿ, ವೈಟ್ ಹಾರ್ಸ್ ರೆಸ್ಟೋರೆಂಟ್ ಮಾಲೀಕರಾದ ಅಶೋಕ್, ಮಂಜುಳಾ ನೇತ್ರಾಲಯ ಬಾಲು ಹಾಗೂ ಸಮಾಜ ಸೇವಕ ಬೇಕರಿ ನಾಗರಾಜ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಮಹಿಳಾ ಪೊಲೀಸ್ ಪೇದೆ ಚಿನ್ನಮ್ಮ ಹಾಗೂ ಅನಿತಾರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಆಯೋಜಕರಾದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಬ್ಲೂ ಜೆಮ್ ಶಾಲೆಯ ವ್ಯವಸ್ಥಾಪಕರಾದ ಶ್ರೀಮತಿ ಸಂದ್ಯಾ, ಶ್ರೀಮತಿ ಭವ್ಯಾ ಹಾಜರಿದ್ದರು.
ವರದಿ ಪೃಥ್ವಿರಾಜು ಜಿ.ವಿ




















