ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಜ ಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ: ಮಕ್ಕಳಿಗೆ ಪುಸ್ತಕ-ಪೆನ್ನು ವಿತರಣೆ.

ಗುರುಮಠಕಲ್, ಜ.21: ನಿಜ ಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಅಂಗವಾಗಿ ಪಟ್ಟಣದ ಮಲ್ಲಯ್ಯ ಕಟ್ಟ ಶಾಲೆಯ ಮಕ್ಕಳಿಗೆ ಬುಧವಾರ ಪುಸ್ತಕ, ಪೆನ್ನುಗಳನ್ನು ಶಿಕ್ಷಣ ಪ್ರೇಮಿ ಮಾಜಿ ಕಾಡಾ ಅಧ್ಯಕ್ಷ ವಿಜಯ್ ಕುಮಾರ್ ನೀರೆಟಿ ವಿತರಿಸಿದರು.

ಸಮ ಸಮಾಜದ ಸುಧಾರಕ, ಕಾಯಕಯೋಗಿ ಬಸವಣ್ಣನವರ ಅನುಯಾಯಿ, ನಾಡಿನ ಶ್ರೇಷ್ಠ ತತ್ವಜ್ಞಾನಿ ಶರಣ ಶ್ರೀ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲಿಸಿದರು ಎಂದು ಹೇಳಿದರು.

ಶಾಲೆಯ ಇತಿಹಾಸ ವಿವರಿಸಿ ನಮ್ಮ ತಂದೆ ನಿವೃತ್ತ ಶಿಕ್ಷಕರಾಗಿದ್ದ ಹಣಮಂತಪ್ಪ ನೀರೆಟಿ 1982 ರಲ್ಲಿ ಆಗಿನ ಶಾಸಕ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮನವಿ ಮಾಡಿ ಶಾಲೆ ಮಂಜೂರಿಸಿಕೊಂಡರು. ಶಾಲೆಗೆ ಮನೆಯಿಂದ ಖುರ್ಚಿ ಸಹ ನೀಡಿದ್ದು ಈಗಲೂ 43 ವರ್ಷ ಬಳಿಕ ಖುರ್ಚಿ ಶಾಲೆಯಲ್ಲಿ ಸುರಕ್ಷಿತವಾಗಿ ಇಟ್ಟಿರುವದು ಖುಷಿ ತಂದಿದೆ, ಇಂದು ನೂರಾರು ಬಡ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ ಇದೊಂದು ಶೈಕ್ಷಣಿಕ ಕ್ರಾಂತಿ ಎಂದು ಹೇಳಿದರು.

ಶಾಲೆಯ ಮುಖ್ಯಗುರುಗಳು ಶ್ರೀನಿವಾಸಗೌಡ, ಸಹ ಶಿಕ್ಷಕರಾದ ವೆಂಕಟೇಶ್ ನೀರೆಟಿ , ಸುನಂದಾ, ಎಸ್‌ಡಿಎಂಸಿ ಅಧ್ಯಕ್ಷ ಬಸ್ಸಪ್ಪ ಎಡೆಪಲ್ಲಿ, ಕಬ್ಬಲಿಗ ಸಮಾಜದ ಭೀಮಶಂಕರ ಪಡಿಗೆ, ಸವಿತಾ ಸಮಾಜ ಅಧ್ಯಕ್ಷ ರಮೇಶ್ ಹಡಪದ, ಅಜಯ್ ಡೊಂಗುರ್, ಭೀಮಪ್ಪ, ಓಂಪ್ರಕಾಶ್ ಹಾಜರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!