ಬಾಗಲಕೋಟೆ/ ಹುನಗುಂದ : ತಾಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ವಿವಿಧೋದ್ದೇಶಗಳ ಸೌಹಾರ್ಧ ಸಹಕಾರಿ ಸಂಘ ನಿ. ವತಿಯಿಂದ ನೂತನ ಶಾಖೆ, ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕೂಡಲಸಂಗಮದ ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಕೂಡಲಸಂಗಮ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿಜಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಸಂಸ್ಥಾಪಕರು ಬಾಪೂಜಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ದ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಪಾಟೀಲ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಲ್ಎಂ ಪಾಟೀಲ್ ದುರಿನರಾದ ನೀಲಪ್ಪ ಗೌಡ ಗೌಡರ ಬಾಪೂಜಿ ವಿವಿಧೇದ್ದೇಶಗಳ ಸಹಕಾರಿ ಸಂಘದ ಕೂಡಲಸಂಗಮ ಶಾಖೆಯ ಸಂಗನಬಸಪ್ಪಗೌಡ ಜಿ ಪಾಟೀಲ ಧುರೀಣರಾದ ಗಂಗಾಧರ ದೊಡ್ಮಮನಿ, ವಸಂತ ದೇಶಪಾಂಡೆ ಬಾಗಲಕೋಟೆಯ ಬಾಪೂಜಿ ಮಲ್ಟಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಎಸ್ ಸಿ ಮೋಟಗಿ ಹಾಗೂ ಕೂಡಲ ಸಂಗಮ ಶಾಖೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
- ಕರುನಾಡ ಕಂದ ಪತ್ರಿಕೆ.




















