ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ಅಧ್ಯಕ್ಷರಾದ ಅಮರನಾಥ ಸಾಹು ಕುಳಗೇರಿ ಅವರ ನೇತೃತ್ವದಲ್ಲಿ ಜೈ ಕರವೇ ಪಡಗದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ಗೌಡಪ್ಪಗೌಡ ಪೊಲೀಸ್ ಪಾಟೀಲ್ ಇವರನ್ನು ನೇಮಿಸಿ ಮಾತನಾಡಿದ ಅವರು
ಕರ್ನಾಟಕ ರಾಜ್ಯದ ನೆಲ ಜಲ ಭಾಷೆ ಸಂಸ್ಕೃತಿಯನ್ನು ರಕ್ಷಿಸಲು ಹೋರಾಟಗಳನ್ನು ರೂಪಿಸಿಕೊಂಡು ಸಂಘಟನೆಯ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮುಂದುವರಿಯಲು ತಿಳಿಸಿದರು.
ಗ್ರಾಮ ಘಟಕದ ಪದಾಧಿಕಾರಿಗಳು :
ಗೌರವ ಅಧ್ಯಕ್ಷ ರಾಮನಗೌಡ ಪೊಲೀಸ್ ಪಾಟೀಲ್,
ಗ್ರಾಮ ಘಟಕದ ಅಧ್ಯಕ್ಷರಾಗಿ ಗೌಡಪ್ಪಗೌಡ ಮಾಲಿ ಪಾಟೀಲ್,
ಪ್ರಧಾನ ಕಾರ್ಯದರ್ಶಿಯಾಗಿ ಪರಶು ಎ ಹೊಸಮನಿ, ಉಪಾಧ್ಯಕ್ಷರಾಗಿ ನಿಂಗಪ್ಪ ವಿಭೂತಹಳ್ಳಿ, ಖಜಾಂಚಿಯಾಗಿ ಸಿದ್ದಪ್ಪ ಟಣಕೇದಾರ್,
ಸಂಘಟನಾ ಕಾರ್ಯದರ್ಶಿಯಾಗಿ ಶಿವನಗೌಡ ಪೊಲೀಸ್ ಪಾಟೀಲ್,
ವಕ್ತಾರರಾಗಿ ಶರಣಪ್ಪ ಎಸ್ ಗೋಗಿ,
ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ನಿಂಗಣ್ಣ ಗೌಡ ಪೊಲೀಸ್ ಪಾಟೀಲ್,
ರೈತ ಘಟಕದ ಅಧ್ಯಕ್ಷರಾಗಿ ಮರೆಪ್ಪ ಬಡಿಗೇರ್ ಹಾಗೂ ಸದಸ್ಯರಾಗಿ ಈರಪ್ಪ, ಕೃಷ್ಣ ದೊರಿ , ಸಂಗಪ್ಪ ನಾಟಿಕರ್, ಗುರಪ್ಪ ಬಡಿಗೇರ್, ನಿಂಗಪ್ಪ ಮಾಂತೇಶ್ ಬಡಿಗೇರ ಅವರನ್ನು ನೇಮಕ ಮಾಡಲಾಯಿತು.
ಈ ಸಂಧರ್ಭದಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಯಡ್ರಾಮಿ ತಾಲೂಕಾ ಯುವ ಘಟಕದ ಅಧ್ಯಕ್ಷರಾದ ಪ್ರಭು ದೊರೆ ಸುಂಬಡ, ರಾಚೋಟಯ್ಯ ಹಿರೇಮಠ, ಕೃಷ್ಣ ತಳವಾರ್, ಆಕಾಶ್ ಅವರಾದಿ, ಮುತ್ತು ಮುಳ್ಳೊಳ್ಳಿ ಸೇರಿದಂತೆ ಜೈ ಕ. ರ. ವೇ. ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ




















