
ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವಪಟ್ಟಣ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಮರೆಪ್ಪ ಬಿ ಧರ್ಮಪುರ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ಕಾರಿ ಹಿ. ಪ್ರಾ. ಶಾಲೆ ಪೂಜೆ ಸಲ್ಲಿಸಿದರು. ನಂತರ ರೇವಣ್ಣ ಡಿ ಕರ್ಕಳ್ಳಿ ಪ್ರಭಾರಿ ಮುಖ್ಯ ಗುರುಗಳು ಸರಕಾರಿ ಹಿ. ಪ್ರಾ. ಶಾಲೆ ಬಸವಪಟ್ಟಣ ರವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಮಹತ್ವ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ರಾಷ್ಟ್ರಿಯ ಹಬ್ಬಗಳ ಮಹತ್ವ, ಶಿಕ್ಷಕರ ಬೋಧನೆ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಕುರಿತು ಬಸವರಾಜ ಮಾಲಿ ಪಾಟೀಲ ಅವರು ಮಾತನಾಡಿ, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಆಡಳಿತ ನಡೆಸಬೇಕಾದರೆ ಸಂವಿಧಾನವು ಮುಖ್ಯವಾಗಿರುತ್ತದೆ. ಸಂವಿಧಾನವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬರೆದಿದ್ದಾರೆ, ಇಂದು ನಮ್ಮ ದೇಶ ಅತ್ಯಂತ ಮಹತ್ವ ದಿನವಾಗಿದೆ. ಈ ದಿನದಂದು ಭಾರತವು ಗಣರಾಜ್ಯ ರಾಷ್ಟ್ರವಾಯಿತು. ನಮ್ಮ ದೇಶಕ್ಕೆ ಸಂವಿಧಾನವು 26 ಜನೆವರಿ 1950 ರಂದು ಜಾರಿಗೆ ಬಂದ ದಿನ ಇದಾಗಿದೆ. ಸಂವಿಧಾನವು ನಮಗೆ ಹಕ್ಕುಗಳ ಜೊತೆಗೆ ಕರ್ತವಗಳನ್ನು ಕಲಿಸುತ್ತದೆ . ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ.
ಈ ಸಂದರ್ಭದಲ್ಲಿ ರೇವಣ್ಣ ಡಿ ಕರ್ಕಳ್ಳಿ ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಹಿ. ಪ್ರಾ. ಶಾಲೆ ಬಸವಪಟ್ಟಣ ಮಾತನಾಡಿದರು.
ಮಕ್ಕಳ ಕಲಿಕೆ ಕಂಡು ಸಂತಸವನ್ನು ವ್ಯಕ್ತಪಡಿಸಿದರು. ಪ್ರತಿ ಮಗು ವೇದಿಕೆ ಬಂದು ಗಣರಾಜ್ಯೋತ್ಸವ ಕುರಿತು ಭಾಷಣವನ್ನು ಕೇಳಿ ಆನಂದಿಸಿದರು. ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಧೈರ್ಯವನ್ನು ಕಂಡು ಮುಂದಿನ ದಿನಮಾನಗಳಲ್ಲಿ ಉನ್ನತ ಹುದ್ದೆಯ ಅಧಿಕಾರಿ ಆಗಲಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮುಖ್ಯವಾಗಿರುತ್ತದೆ ಮತ್ತು ಸಹಕಾರ ನೀಡಬೇಕೆಂದು ಹೇಳಿದರು. ಮಕ್ಕಳ ಪ್ರತಿಭೆಯನ್ನು ಕಂಡು ಈ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ ಈ ಸಂದರ್ಭದಲ್ಲಿ ಮಹೇಶ್ ಹಿತ್ತಾಳೆ ಗ್ರಾ. ಪಂ. ಅಧ್ಯಕ್ಷರು ಬಸವಪಟ್ಟಣ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬೇಬಿ ಮೇಡಂ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳು ಬಸವಪಟ್ಟಣ, ರೇವಣ ಡಿ ಕರ್ಕಳ್ಳಿ ಪ್ರಭಾರಿ ಮುಖ್ಯಗುರುಗಳು ಸ. ಹಿ. ಪ್ರಾ. ಶಾಲೆ ಬಸವಪಟ್ಟಣ, ಮರೆಪ್ಪ ಬಿ ಧರ್ಮಪುರ್ ಎಸ್ ಡಿ ಎಂ ಸಿ ಅಧ್ಯಕ್ಷರು, ಮಹೇಶ್ ಹಿತ್ತಾಳೆ ಗ್ರಾ. ಪಂ ಅಧ್ಯಕ್ಷರು ಬಸವಪಟ್ಟಣ, ಮಹೇಶ್ ದೈಹಿಕ ಶಿಕ್ಷಕರು, ಎಸ್ ಡಿ ಎಂ ಸಿ ಸರ್ವ ಸದಸ್ಯರು ಹಾಗೂ ಬಸವಪಟ್ಟಣ ಗ್ರಾಮದ ಪಾಲಕರು ಮತ್ತು ಪೋಷಕರು ಊರಿನ ಪ್ರಮುಖ ಗಣ್ಯರು ಮುದ್ದು ಮಕ್ಕಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















