
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶ್ರೀ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಶಾಲೆಯ ೧೨ ನೇ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಪ್ಪಳ ರಾಮಕೃಷ್ಣ ಮಿಷಿನ್ ಸ್ವಾಮೀಜಿಗಳು ಉದ್ಘಾಟಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಪ್ರೊ.ವೀರಣ್ಣ ನಿಂಗೋಜಿ ಶಾಲೆ ಬೆಳೆದು ಬಂದ ವಿಚಾರ ತಿಳಿಸಿದರು.
ನಿ.ಪ್ರಾಚಾರ್ಯ ಗವಿಸಿದ್ದಪ್ಪ ನಿಂಗೋಜಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಮಕ್ಕಳ ಕಲಿಕಾ ವಿಚಾರದಲ್ಲಿ ಪಾಲಕರ ಜವಾಬ್ದಾರಿ ಕುರಿತು ಹೇಳಿದರು.
ಶಿವಶರಣಪ್ಪ ಬಳಿಗಾರ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ನಿಂಗೋಜಿ ಯವರ ಬಾಲ್ಯದ ಶಿಕ್ಷಣ, ಗ್ರಾಮೀಣಭಾಗದಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಶಿಕ್ಷಣ ಸೇವೆಯ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ನಿಂಗೋಜಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಕರಮುಡಿ ಗ್ರಾಮದ ೭ ಹಾಗೂ ೧೦ ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು.
ಸಹಕಾರ ಕ್ಷೇತ್ರದ ಸಾಧಕರಾದ ಶೇಖರಗೌಡ ಉಳ್ಳಾಗಡ್ಡಿ ಅವರಿಗೆ ಅವ್ವ- ಅಪ್ಪ ಪ್ರಶಸ್ತಿ ನೀಡಿ ಸನ್ಮಾನಿಸಿದರು, ಸ್ವಾವಲಂಬಿ ಮಹಿಳಾ ಸಾಧಕಿ ಶ್ರೀಮತಿ ರೇಣುಕಾ ಸಂಗನಾಳ ಇವರಿಗೆ ಶ್ರೀಮತಿ ಲಲಿತಾ ವೀ ನಿಂಗೋಜಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.
ವೀರಣ್ಣ ವಾಲಿ, ರಾಯಪ್ಪ ಉಂಡಿ,ನೀಲನಗೌಡ ಪವಾಡಿಗೌಡ್ರ, ಸಂಸ್ಥೆಯ ಅಧ್ಯಕ್ಷರಾದ ಶಶಿಕಾಂತ ನಿಂಗೋಜಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ



















