ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ
ಕೆಲ್ಲೂರು ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಮನವಿ.
ತಹಶೀಲ್ದಾರ್ ರವರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಉಪಯೋಗವಲ್ಲದ ನೀರು ಕೆರೆಗೆ ಹೋಗುವುದಕ್ಕೆ ರಸ್ತೆ ಬದಿಯ ಕಸ ತುಂಬಿಕೊಂಡು ಮುಚ್ಚಿ ರಸ್ತೆ ಮಧ್ಯದಲ್ಲಿಯೇ ನೀರು ಹರಿದು ಹೋಗುತ್ತಿತ್ತು
ಅದನ್ನು ಕ್ರಿಸ್ತ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕರು ಸ್ವಚ್ಛಗೊಳಿಸಿ ಮಕ್ಕಳಿಗೆ, ರೈತರಿಗೆ ಸಾರ್ವಜನಿಕರಿಗೆ ತಿರುಗಾಡಲು ಸ್ವಚ್ಛ ಮಾಡಿಕೊಟ್ಟಿರುವುದಕ್ಕೆ
ಕೆಲವರು ಕೆರೆ ಮುಚ್ಚುತ್ತಿರುವುದು ಎದ್ದು ಭಾವಿಸಿ ಅರಕಲಗೂಡು ಕ್ರಿಸ್ತ ಜ್ಯೋತಿ ಶಾಲೆಯ ಹೆಸರನ್ನು ಬಳಸಿಕೊಂಡು ಅಪಪ್ರಚಾರ ಎಸಗುತ್ತಿದ್ದಾರೆ
ಅರಕಲಗೂಡು ತಹಶೀಲ್ದಾರ್ ಅವರು ಹಾಗೂ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಕೂಡಲೇ ಕೆಲ್ಲೂರು ಕೆರೆ ಒತ್ತುವರಿಯಾಗಿರುವ ವಿಸ್ತೀರ್ಣವನ್ನು ಅಳತೆ ಮಾಡಿ ಕೆರೆಯ ಸ್ವಾಧೀನಕ್ಕೆ ಬಿಡಿಸಿ ಕೊಡಬೇಕಾಗಿ ಕೆಲ್ಲೂರು ಗ್ರಾಮಸ್ಥರಿಂದ ಮನವಿ.
- ಕರುನಾಡ ಕಂದ ಪತ್ರಿಕೆ



















