
ಕಲಬುರಗಿ/ ಕಾಳಗಿ : ರಟಕಲ್ ಫೆ. 15 ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಬಂಕನಾಥೇಶ್ವರ ದೇವಸ್ಥಾನ ರಟಕಲ್ ನಲ್ಲಿ ನಾಳೆ ದಿನಾಂಕ 15.2.2026 ರವಿವಾರದಂದು ಮಹಾ ಶಿವರಾತ್ರಿಯ ಪ್ರಯುಕ್ತ ಶಿವಲಿಂಗಕ್ಕೆ ಸಾಯಂಕಾಲ 5:30 ನಿಮಿಷಕ್ಕೆ ಮಹಾ ರುದ್ರಾಭಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ ಜಾಗರಣೆ ಕಾರ್ಯಕ್ರಮವು ಬಂಕನಾಥೇಶ್ವರ ಭಜನಾ ಮಂಡಳಿ ರಟಕಲ್ ಇವರಿಂದ ಭಜನಾ ಕಾರ್ಯಕ್ರಮವು ಜರುಗುವುದು.
ಪ್ರಯುಕ್ತ ಗ್ರಾಮದ ಭಕ್ತಾದಿಗಳೆಲ್ಲರೂ ರುದ್ರಾಭಿಷೇಕ ಪೂಜೆಯಲ್ಲಿ ಭಾಗಿಯಾಗಿ ದೇವರ ದರ್ಶನಾಶೀರ್ವಾದ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿ ರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನಿತರಾಗಬೇಕಾಗಿ ವಿನಂತಿ.
ವರದಿ ಎಸ್ ವಿ ಗಂಗಾಣಿ.




















