
ಕೊಪ್ಪಳ/ ಕುಕನೂರ : ನಮ್ಮೆಲ್ಲರ ಜೀವನದ ಬದುಕು ಸಾರ್ಥಕವಾಗಬೇಕಾದರೆ ಮತ್ತೊಬ್ಬರ ಬದುಕಿನ ಬಾಳಿಗಾಗಿ ಪರೋಪಕಾರಿ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜೂರಿನ ಬೃಹನ್ಮಠದ ಮ.ಘ.ಚ ಅಭಿನವ ಪಂಚಾಕ್ಷರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಅವರು ತಾಲೂಕಿನ ರಾಜೂರ ಗ್ರಾಮದ ಶರಣಬಸವೇಶ್ವರ ಬೃಹನ್ಮಠದಲ್ಲಿ ೬೬ ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು. ಮಠಗಳು ಭಕ್ತರಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ನೀಡುವಲ್ಲಿ ಶ್ರಮಿಸುತ್ತಿವೆ, ಮಠಗಳ ಪೂಜ್ಯರ ಕೊಡುಗೆ ಅಪಾರವಾದದು ಎಂದು ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ್ ಅವರು ” ಜೀವನದ ಸಾರ್ಥಕ ಬದುಕು ಮತ್ತು ಪರೋಪಕಾರ ಚಿಂತನ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಶರಣಬಸಪ್ಪ ದಾನಕೈ ಉಪಸ್ಥಿತಿ ಇದ್ದರು. ಸಂಗನಾಳ ಗ್ರಾಮದ ಶರಣಪ್ಪ ಕವಳಕೇರಿ,ಶರಣಪ್ಪ ಶಿವರಡ್ಡಿ ಸಂಗೀತ ಸೇವೆ ನೀಡಿದರು.ಶೇಖರಪ್ಪ ದೇ.ಮೂಲಿಮನಿ ಭಕ್ತಿಸೇವೆ ವಹಿಸಿಕೊಂಡಿದ್ದರು.
ವಿರುಪಾಕ್ಷಯ್ಯ ಬಡ್ಡಿಮಠ, ಶಿವಲಿಂಗಪ್ಪ ಕವಲೂರ ಭಾಗವಹಿಸಿದ್ದರು. ಜಗದೀಶ ಬಡಿಗೇರ ವಂದಿಸಿದರು. ಗ್ರಾಮದ ಗುರು ಹಿರಿಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
- ಕರುನಾಡ ಕಂದ ಪತ್ರಿಕೆ




















