ಸುರಪುರ : ತಾಲ್ಲೂಕಿನ ಕೆ. ತಳ್ಳಳ್ಳಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರರಾದ ಶಿವಾನಂದ ಎಸ್ ಅಂಗಡಿ ಯವರ ಧರ್ಮಪತ್ನಿ ರಶ್ಮಿ / ಶಿವಾನಂದ ಅಂಗಡಿ ವಯಸ್ಸು (42) ರವಿವಾರ ಮಧ್ಯಾಹ್ನ 2:00 ಗಂಟೆಗೆ ತೀವ್ರ ಹೃದಯಾಘಾತದಿಂದ ಕಲಬುರಗಿ ನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಪತಿ, ಸುಪುತ್ರ ,ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ಸೋಮವಾರ) ಮಧ್ಯಾಹ್ನ 2:30 ಕ್ಕೆ ಸುರಪುರ ತಾಲ್ಲೂಕಿನ ಕುರುಬನ ತಳ್ಳಳ್ಳಿ ಗ್ರಾಮದ ಸ್ವಂತ ಜಮೀನಿನಲ್ಲಿ ವೀರಶೈವ ಧರ್ಮದ ವಿಧಿ ವಿಧಾನದಂತೆ ನೆರವೇರಲಿದೆ.
- ಕರುನಾಡ ಕಂದ ಪತ್ರಿಕೆ



















