
ಕೊರಟಗೆರೆ : ತಾಲ್ಲೂಕು ಕಚೇರಿಯಲ್ಲಿ ಆಡಳಿತ ವರ್ಗ ಮತ್ತು ವೀರಶೈವ ಧರ್ಮದ ಎಲ್ಲರೂ ಈ ದಿನದಂದು
ಆದಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಗ್ರೇಡ್ 2 ರಾಮ್ ಪ್ರಸಾದ್ ಸಮ್ಮುಖದಲ್ಲಿ ಆಯೋಜನೆ ಮಾಡಲಾಗಿತ್ತು. ರೇಣುಕಾಚಾರ್ಯರು ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಸಹೋದರತ್ವದ ತತ್ವಗಳನ್ನು ಬೋಧಿಸಿ ಅವರ ವಚನಗಳು ಜನರಿಗೆ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆ ಎಂಬ ತತ್ತ್ವಗಳನ್ನು ಪರಿಚಯಿಸಿವೆ.
ರೇಣುಕಾಚಾರ್ಯರು ಸಮಾಜದಲ್ಲಿನ ಮೇಲು-ಕೀಳು ಭಾವನೆಗಳನ್ನು ಹೋಗಲಾಡಿಸಲು ಸಮಾಜದಲ್ಲಿ ಅವಮಾನಿತ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರದ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿದರು.
ಸಮಾನತೆಎಂಬ ತತ್ವಕ್ಕೆ ಮಹತ್ವ ನೀಡಿದರು, ಅದರಲ್ಲಿ ಎಲ್ಲಾ ವರ್ಣಗಳೂ ಸಮಾನವೆಂಬ ನಂಬಿಕೆಯನ್ನು ಹರಡಿದರು.
ಈ ಆಚರಣೆಯು ಸಮಾಜದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಉದ್ದೇಶವನ್ನು ಹೊಂದಿಲಾಗಿತ್ತು ಎಂದು ವೀರಶೈವ ಮಂಡಳಿಯ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ರೇಣುಕಾಚಾರ್ಯರ ಜಯಂತಿಯ ವಿಷಯ ಮತ್ತು ಶುಭಾಶಯಗಳನ್ನು ಗ್ರೇಡ್ 2 ರಾಮಪ್ರಸಾದ್ ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್2 ರಾಮ್ ಪ್ರಸಾದ್, ಬಸವರಾಜು ರಘು,ರಾಜಣ್ಣ, ಸುರೇಶ್, ಶಿವಾನಂದ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ. ಪ್ರಸನ್ನಕುಮಾರ್. ಎಸ್., ಕೊರಟಗೆರೆ




















