
ಬೀದರ್ ಜಿಲ್ಲೆ ಬಸವಕಲ್ಯಾಣದ ಹೊರವಲಯದಲ್ಲಿರುವ ಬಸವಕಲ್ಯಾಣ ಪ್ರಾಧಿಕಾರ ಮಂಡಳಿಯ ಪ್ರವಾಸಿ ಮಂದಿರದಲ್ಲಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ರಾಜ್ಯಾಧ್ಯಕ್ಷರಾದ ಶ್ರೀ ಹೆಚ್. ಸುರೇಶ ರವರ ಒಪ್ಪಿಗೆ ಮೇರೆಗೆ ಬೀದರ್ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಅವಿನಾಶ ಬುಧರಕರ್ ರವರ ಆದೇಶದಂತೆ ಬಸವಕಲ್ಯಾಣ ತಾಲೂಕು ಅಧ್ಯಕ್ಷರಾದ ಶ್ರೀ ಸುರೇಶ ಜಮ್ಮು ರವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ಪದಾಧಿಕಾರಿಗಳ ನೇಮಕಾತಿಯಲ್ಲಿ ತಾಲೂಕು ಗೌರವಾಧ್ಯಕ್ಷರಾಗಿ ಆಕಾಶ ಮುತ್ತೆ,
ಉಪಾಧ್ಯಕ್ಷರಾಗಿ ದೀಪಕ ಕಾಂಬಳೆ,
ಪ್ರಧಾನ ಕಾರ್ಯದರ್ಶಿ ಅರುಣ ಹಾಲುರೆ, ಕಾರ್ಯದರ್ಶಿ ಶಿವಪ್ರಸಾದ ಭಾಲ್ಕೆ,
ಸದಸ್ಯರಾಗಿ ರಾಹುಲ ಶಾಶಟ್ಟೆ, ಅಂಕುಶ ಧರೆ, ಅವಿನಾಶ ನಾಟಿಕರ್, ಪ್ರಭು ಸೋನಕಾಂಬಳೆ, ರವಿ ಚಿನಕೆರೆ, ರಾಹುಲ್ ಸೂರ್ಯವಂಶಿ, ಹಾಗೂ ಇತರರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರವಿ ನಾವದ್ಗೇಕರ , ಜಿಲ್ಲಾಧ್ಯಕ್ಷರಾದ ಅವಿನಾಶ ಬುಧರಕರ ಹಾಗೂ ತಾಲೂಕು ಅಧ್ಯಕ್ಷರಾದ ಸುರೇಶ ಜಮ್ಮು ಅವರು ಸಂಘಟನೆಯ ಉದ್ದೇಶಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಸುಭಾಷ ಮಚಕುರೆ, ದತ್ತಾತ್ರಿ ಧುರೆ, ಕೃಷ್ಣಾ ಶಿಂಗೆ, ಭಾಸ್ಕರ ದವಲೆ, ಸಂಪತ್ ಜಮ್ಮು, ರಾಹುಲ ಫುಲೆ, ರಾಜು ಮೇಟಿಕಾರ್, ರಾಜಕುಮಾರ ಮರಮಂಚೆ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















