ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೀನಾಗು

ಜ್ಞಾನದಿಂದ ಅಜ್ಞಾನ ದೂಡುವವನಾಗು
ಸನ್ಮಾರ್ಗದಿಂದ ಕಾಯಕ ಮಾಡುವವನಾಗು
ಅಂತರಂಗದಿಂದ ಪರಿಶುದ್ಧನಾಗು
ಅಂತ:ಕರಣದಿಂದ
ಅರಿಯುವಂತವನಾಗು.

ಜ್ಞಾನದಲ್ಲಿ ಅಂಬೇಡ್ಕರ್ ನಂತಾಗು
ಕ್ರಾಂತಿಯಲ್ಲಿ ಬಸವಣ್ಣನಂತಾಗು
ಶಾಂತಿಯಲ್ಲಿ ಬುದ್ಧನಂತಾಗು
ಹೋರಾಟದಲ್ಲಿ ಭೀಮನಂತಾಗು.

ಹಿರಿಯರನ್ನು ಗೌರವಿಸುವವನಾಗು
ಸರ್ವರನ್ನು ಪ್ರೀತಿಸುವವನಾಗು
ಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು.

ಪರರಿಗೆ ನೆರಳಾಗು
ಕಷ್ಟಗಳಿಗೆ ಹೆಗಲಾಗು
ಹೆತ್ತವರಿಗೆ ಕೀರ್ತಿಯಾಗು
ಸಮಾಜಕ್ಕೆ ಒಳಿತಾಗು.

ಹಸಿವಿಗೆ ಅನ್ನವಾಗು
ಜ್ಞಾನಕ್ಕೆ ಹೆಸರಾಗು
ಜಾತಿಗೆ ನಂಜಾಗು
ಪ್ರೀತಿಗೆ ಜೇನಾಗು.

ಸತ್ಯಕ್ಕೆ ತಲೆಬಾಗು
ನ್ಯಾಯಕ್ಕೆ ಬದ್ಧನಾಗು
ಮಮತೆಗೆ ಮಡಿಲಾಗು
ಕರುಣೆಗೆ ಕಡಲಾಗು.

ದಾರಿಗೆ ಬೆಳಕಾಗು
ಬದುಕಿಗೆ ಚೇತನವಾಗು
ಹಣದಲ್ಲಿ ಬಡವನಾಗು
ಗುಣದಲ್ಲಿ ಸಿರಿವಂತನಾಗು.

ಸಂತರ ಒಡನಾಡಿಯಾಗು
ಶರಣರ ಜೊತೆಯಾಗು
ದ್ವೇಷಕ್ಕೆ ಅಗ್ನಿಯಾಗು
ಪ್ರೇಮಕ್ಕೆ ಗಂಧವಾಗು.

ಸೋಮಾರಿಗಳಿಗೆ ಮಾದರಿಯಾಗು
ಕೈಲಾಗದ ವರಿಗೆ ಕೋಲಾಗು
ಸೋತವರಿಗೆ ಭರವಸೆಯಾಗು
ಗೆದ್ದವರಿಗೆ ಚಪ್ಪಾಳೆಯಾಗು.

ಒಡಹುಟ್ಟಿದವರಿಗೆ ಒಡಲಾಗು
ಹೆತ್ತವರಿಗೆ ಋಣಿಯಾಗು
ದೀನರಿಗೆ ಬಂಧುವಾಗು
ಮರಣಕ್ಕೆ ಶರಣಾಗು.

ರಚನೆ ಶ್ರೀಮತಿ ಜ್ಯೋತಿ ಸಂಜು ಮುರಾಳೆ. ✍🏻

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!