
ವಾಲ್ಮೀಕಿ ಸಮಾಜದ ಮೂಲ ಧರ್ಮ ಗುರುಗಳಿಂದ ಶ್ರೀ ರಾಮ ನವಮಿಯ ಪ್ರಯುಕ್ತ ಹುಲಿಹೈದರ ಗ್ರಾಮದ ಆಂಜನೇಯ ಸ್ವಾಮಿ ಸನ್ನಿದಾನದಲ್ಲಿ ಪಾನಕ ವಿತರಣೆ ಜರುಗಿತು.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ
ಹುಲಿಹೈದರ ಗ್ರಾಮದಲ್ಲಿ ರಾಜ ಪರಿವಾರದವರಿಂದ ರಾಮ ನವಮಿಯ ಪ್ರಯುಕ್ತ ಭಕ್ತಾದಿಗಳಿಗೆ ಪಾನಕ ಮತ್ತು ಕೋಸಂಬರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಗುರುಗಳಾದ ರಾಜಾ ವಿಜಯನಾಯಕ, ರಾಜಾ ನವೀನ್ ಚಂದ್ರ ನಾಯಕ, ರಾಜಾ ಚನ್ನಪ್ಪ ನಾಯಕ, ರಾಜಾ ಶರತ್ ಚಂದ್ರ ನಾಯಕ, ರಾಜಾ ಆನಂದ ನಾಯಕ ಮತ್ತು ಸುರಪುರ ಕರಡಕಲ್ಲ ಜಹಗೀರ್ದಾರಾದ ರಾಜಾ ದೇವರಾಜ ನಾಯಕ, ಚಿತ್ರದುರ್ಗ ಅರಸು ಮನೆತನದ ರಾಜಾ ಉಡಚಪ್ಪ ನಾಯಕ, ಹನುಮಂತಪ್ಪ ನಾಯಕ, ಶರಣಪ್ಪ, ಸಿದ್ರಾಮೇಶ್, ಅಮರೇಶ್ ಕಂಬಾರ, ಅಮರೇಶ್ ಕಮಾನಿ, ಲಕ್ಷ್ಮಣ್, ದೇವರಾಜ್ ಗುರಿಕಾರ, ಮಂಜುನಾಥ ಸೇರಿದಂತೆ ಇನ್ನಿತರರು ಇದ್ದರು.
- ಕರುನಾಡ ಕಂದ ಪತ್ರಿಕೆ




















