ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್ ಸಿ ಕಾಲೋನಿಗೆ ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಇರುತ್ತದೆ. ಪ್ರತಿ ವಾರ್ಡಿಗೆ 4-5 ದಿನಗಳ ನಂತರ ನೀರು ಬಿಡಬೇಕು ಅಂತ ನಿಯಮವಿರುತ್ತದೆ ಆದರೆ ನೀರು ಬಿಡುವ ವಾಟರ್ ಮ್ಯಾನ್ ಯಾರು ತನಗೆ 100 ರಿಂದ 200 ಕೊಡುತ್ತಾರೆ ಅವರಿಗೆ ದಿನ ನೀರು ಬಿಡುತ್ತಾನೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯತ ಆಡಳಿತ ಅಧಿಕಾರಿಗಳಾದ ಪಿ ವಾಯ್ ಕಾಂಬಳೆ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಕಾಂತ ಹಡಲಸಂಗ ಇತ್ತ ಕಡೆ ಸ್ವಲ್ಪ ಗಮನಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಉಮೇಶ್ ನಾಟಿಕಾರ, ಪವನಕುಮಾರ ರೂಗಿ, ರಾಮಣ್ಣ ನಾಟೀಕಾರ , ಅಕ್ಷಯ ರೂಗಿ ಆಗ್ರಹಿಸಿದ್ದಾರೆ.
- ಕರುನಾಡ ಕಂದ




















