ಸಿರುಗುಪ್ಪ – ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2025-26ನೇ ಸಾಲಿನ 5054 ಫ್ಲೂಡ್ ಅನುದಾನದ ಯೋಜನೆ ಅಡಿಯಲ್ಲಿ ಸಿರುಗುಪ್ಪ ತಾಲೂಕು ಕೋಟೆ ಹಾಳು ಗ್ರಾಮದಿಂದ ಬೆಂಚಿ ಕ್ಯಾಂಪ್ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ 1.30 ಕೋಟಿ ರೂ, ವೆಚ್ಚದ ಕಾಮಗಾರಿಯನ್ನು ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ರಾಜ್ ಎಇಇ ತಿಪ್ಪೆಸ್ವಾಮಿ, ಮುಖಂಡರಾದ ರೈತ ಸೊಸೈಟಿಯ ಅಧ್ಯಕ್ಷರು ನಾಂಚರಯ್ಯ, ಚೊಕ್ಕ ಪಾಲಾಕ್ಷಗೌಡ, ರಾಮಚಂದ್ರಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷರು ನಾಗೇಂದ್ರ, ಉಪಾಧ್ಯಕ್ಷರು ಭೀಮನಗೌಡ, ಮಲ್ಲಯ್ಯ, ಸಿದ್ದಯ್ಯ, ಲಿಂಗಪ್ಪ, ಮುದುಕಪ್ಪ, ಮುದಿಯಪ್ಪ, ಭಂಡ್ರಾಳ್ ಭೀಮಣ್ಣ, ರಾಮಕೃಷ್ಣ, ಬಿ.ವೆಂಕಟೇಶ್, ಹೆಚ್.ಗಣೇಶ್, ಗೋಪಾಲಪ್ಪ, ಅನ್ಸಾರಿ ಇಸಾಕ್, ಪವನ್ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















