ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ರವರು ನಿರ್ಜಲೀಕರಣ ಎಂದರೇನು, ಕಾರಣ ಮತ್ತು ಚಿಕಿತ್ಸಾ ವಿಧಾನ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನೀರು ಕುಡಿಯುವುದು ಹಣ್ಣುಗಳ ಜ್ಯೂಸ್ ಕುಡಿಯೋದು ತಂಪಿನ ವೇಳೆ ಕೆಲಸ ಮಾಡುವುದು ಸಡಿಲ ಉಡುಪು ತೊಡುವುದು ಮಕ್ಕಳಿಗೆ ಬಿಸಿಲಿನಲ್ಲಿ ಆಡದಂತೆ ನಿರ್ಬಂಧ ಹೇರುವುದು ಮಕ್ಕಳ ಮತ್ತು ವಯೋವೃದ್ಧರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಲಕ್ಷಣಗಳು ಹಾಗೂ ಚಿಕಿತ್ಸೆ ಕುರಿತು ಮತ್ತು ಓ ಆರ್ ಎಸ್ ದ್ರಾವಣ ತಯಾರಿಕಾ ವಿಧಾನವನ್ನು ತಿಳಿಸಿ ಕೊಟ್ಟರು.
ಸಭೆಯಲ್ಲಿ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ಮಕ್ಕಳಲ್ಲಿ ಬೇಸಿಗೆ ಕಾಲದಲ್ಲಿ ದಡಾರ ಪ್ರಕರಣಗಳು ಕಂಡುಬರುವುದು ಸಹಜ ತೀವ್ರತರ ದಡಾರ ರೋಗವನ್ನು ಹೋಗಲಾಡಿಸಲು ಮಕ್ಕಳಿಗೆ ದಡಾರ ಲಸಿಕೆ ನೀಡಲಾಗುತ್ತಿದೆ. ಪ್ರಕರಣಗಳು ಕಂಡುಬಂದ ಕೂಡಲೇ ಆಶಾ ಕಾರ್ಯಕರ್ತರು ತಿಳಿಸುವಂತೆ ಕೋರಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶೃತಿ ಹಾಗೂ ಅಂಗನವಾಡಿ ಕಾರ್ಯಕರ್ತ ಸಂಗಮ್ಮ , ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವರದಿ : ಮಸೀದಿ. ಅಬ್ದುಲ್ ಗೌಸ್. ಸಿರುಗುಪ್ಪ




















