ಸಿರುಗುಪ್ಪ – ಕರ್ನಾಟಕ ಸರ್ಕಾರ 2025-26ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಮಾನ್ಯ ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಸಿಎಂಐಡಿಪಿ ಅಡಿಯಲ್ಲಿ ಮಂಜೂರಾದ 125.78 ಲಕ್ಷ ರೂ,ವೆಚ್ಚದ ಅಭಿವೃದ್ಧಿ ಕಾಮಗಾರಿ ಸಿರುಗುಪ್ಪ ತಾಲೂಕಿನ ಬಾಗೇವಾಡಿಯಿಂದ ರಾಜ್ಯ ಹೆದ್ದಾರಿ – 63 ಜಿಲ್ಲಾ ಮುಖ್ಯ ರಸ್ತೆ 3.45 ಕಿ. ಮೀ ರಲ್ಲಿ ಗಜಗಿನ ಹಾಳ್ ಕರ್ಚಿಗನೂರು ಹತ್ತಿರ ಮತ್ತು 7.50 ಕಿ. ಮೀ ಚಾಣಕನೂರು ಹತ್ತಿರ ಬಾಕ್ಸ್ ಕಲ್ವರ್ಟ್ ನಿರ್ಮಾಣ ಮಾಡುವ ಕಾಮಗಾರಿಗೆ ಅಡಿಗಲ್ಲನ್ನು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ರೈತ ಸಹಕಾರ ಸೊಸೈಟಿಯ ಅಧ್ಯಕ್ಷರು ನಗರಸಭೆಯ ಮಾಜಿ ಅಧ್ಯಕ್ಷರು ನಾಂಚರಯ್ಯ, ಆರ್. ಪಂಪನಗೌಡ, ಟಿ. ದೊಡ್ಡ ವೀರೇಶ ಗೌಡ, ಬಿ. ಬಸವನಗೌಡ ಕರ್ಚಿಗನೂರು, ಎಂ.ಬಗ್ಗೂರು ಗೌಡ, ಚಾಣಕನೂರು ಯು.ಬಗ್ಗೂರು ಗೌಡ, ಚೂಡಿ ಈರಯ್ಯ, ವಡ್ಡರ ಚೂಡಿ ರಮೇಶ, ಹನುಮಂತಪ್ಪ, ಚೆನ್ನಯ್ಯ ಸ್ವಾಮಿ, ಗೋಪಾಲಪ್ಪ, ನಗರ ಸಭೆ ಮಾಜಿ ಸದಸ್ಯರಾದ ಅನ್ಸಾರಿ ಇಸಾಕ್, ಹೆಚ್. ಗಣೇಶ್, ಬಿ.ವೆಂಕಟೇಶ್, ಜಾಜಿ ರಾಮಪ್ಪ, ಬಿಎಂ ಮಣಿಕಂಠ ನಾಯಕ, ಪವನ್ ದೇಸಾಯಿ, ಪಿ ಡಬ್ಲ್ಯೂ ಡಿ ಇಂಜಿನಿಯರ್ ಗಳಾದ ಗಂಗಪ್ಪ, ರಾಕೇಶ್, ಮೊಹಮ್ಮದ್ ಪಾಷಾ, ಗ್ರಾಮ ಪಂಚಾಯತ್ ಪಿ ಡಿ ಓ ಶಾಕಿರ್ ಸಾಬ್, ಊರಿನ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಗ್ರಾಮಸ್ಥರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















