ಸಿರುಗುಪ್ಪ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘ ತಾಲೂಕು ಸಮಿತಿಯಿಂದ ವಿವಿಧ ಹಕ್ಕುಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇವರಿಗೆ ಸಿಡಿಪಿಓ ಪ್ರದೀಪ್ ಕುಮಾರ್ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕು ಸಂಚಾಲಕಿ ಕೆ ಈರಮ್ಮ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ತಾಲೂಕು ಸದಸ್ಯರಾದ ಹಂಪಮ್ಮ ಅಂಬಮ್ಮ ಈರಮ್ಮ ಹೊನ್ನಮ್ಮ ಗಂಗಮ್ಮ ಲಕ್ಷ್ಮಿ ಬಸಮ್ಮ ಹುಲಿಗೆಮ್ಮ ಸರೋಜಾ ಮಾರೆಮ್ಮ ಇನ್ನಿತರ ಮಹಿಳೆಯರು, ಮುಖಂಡರಾದ ಹೆಚ್ ತಿಪ್ಪಯ್ಯ ವಿ. ಮಾರುತಿ ಅಬ್ದುಲ್ ನಬಿ ಮತ್ತಿತರರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















