2026 ಏಪ್ರಿಲ್-14 ರಂದು ಸಂವಿಧಾನ ಶಿಲ್ಪಿ ಡಾ॥ ಬಿ ಆರ್ ಅಂಬೇಡ್ಕರ್ ರವರ ಜಯಂತಿಯನ್ನು ರಾಜ್ಯಾದ್ಯಂತ ಹಾಗೂ ಸರಕಾರಿ/ಅರೆಸರಕಾರಿ ಕಛೇರಿಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಕ್ರಮಕೈಗೊಳ್ಳುವಂತೆ ಚಿದಾನಂದ ಕಾಂಬಳೆ ಅಧ್ಯಕ್ಷರು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿರುತ್ತಾರೆ.
ನಡೆ-ನುಡಿಗೆ ಹೆಸರಾಗಿರುವ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯರವರು ಪ್ರತಿ ವರ್ಷವೂ ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರರ ಆಲೋಚನೆಗಳಿಗೆ ನೀರೆರೆಯುತ್ತಾ ಸಂವಿಧಾನದ ಹಕ್ಕುಗಳು, ಕಾನೂನು ಮತ್ತು ಉದ್ದೇಶಗಳು ತಿಳಿಸಿ ಜಾಗ್ರತಿ ಮೂಡಿಸಿರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ರಾಜ್ಯ ಸರಕಾರಕ್ಕೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು ತಿಳಿಸಿರುತ್ತಾರೆ.
ದಿ. 14.04.2026 ರಂದು ಈ ವರ್ಷ ಹಾಗೂ ಪ್ರತಿವರ್ಷವೂ ಸಂವಿಧಾನ ಶಿಲ್ಪಿ ಡಾ॥ ಬಿ ಆರ್ ಅಂಬೇಡ್ಕರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಕುರಿತು. ಈ ವಿಚಾರವಾಗಿ ಮಾನ್ಯರೆ ಸರ್ಕಾರಿ, ಅರೆಸರ್ಕಾರಿ ಕಛೇರಿಗಳಲ್ಲಿ ಮತ್ತು ಶಾಲಾ, ಕಾಲೇಜುಗಳಲ್ಲಿ ಕೆಲವೇ ಸಿಬ್ಬಂಧಿಗಳು ಬಂದು ಕಾಟಾಚಾರಕ್ಕೆ ಎಂಬಂತೆ ಒಂದು ಕೋಣೆಯಲ್ಲಿ ಪೋಟೋ ಪೂಜೆ ಮಾಡುತ್ತಿರುವದು ಕಂಡು ಬಂದಿರುವುದರಿಂದ, ಈ ಕಾಟಾಚಾರ ಕಾರ್ಯಕ್ರಮ ತಡೆಗಟ್ಟಿ ಕಡ್ಡಾಯವಾಗಿ ಹಿರಿಯ ಅಧಿಕಾರಿಗಳು, ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಛೇರಿಗಳ ಹಾಗೂ ಶಾಲಾ, ಕಾಲೇಜುಗಳ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ॥ ಬಿ ಆರ್ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜಾ ಮಾಡುವುದರ ಜೊತೆಗೆ ಸಭೆಯನ್ನು ಏರ್ಪಡಿಸಿ ಡಾ॥ ಬಿ ಆರ್ ಅಂಬೇಡ್ಕರರವರ ಜಯಂತಿಯನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಣೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕಾಧಿಕಾರಿಗಳಿಗೆ ಸರ್ಕಾರದಿಂದ ಆದೇಶ ಹೊರಡಿಸಲು ಹಾಗೂ ಯಾವುದೇ ಸರಕಾರಿ ಹಾಗೂ ಅರೆಸರಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ಅದ್ದೂರಿಯಾಗಿ ಜಯಂತಿಯನ್ನು ಆಚರಣೆ ಮಾಡಲು ವಿಫಲರಾಗಿರುವದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಸರಕಾರದಿಂದ ಶಿಸ್ತು ಕ್ರಮ ಜರುಗಿಸುವಂತೆ ಈ ಮೂಲಕ ಕೋರಲಾಗಿದೆ ಎಂದು ಚಿದಾನಂದ ಕಾಂಬಳೆ ಅಧ್ಯಕ್ಷರು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುತ್ತಾರೆ.
ವರದಿ ಮನೋಜ್ ನಿಂಬಾಳ




















