ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉಡದಟ್ಟಿ ಉತ್ಸವದಲ್ಲಿ ಸಾಂಪ್ರದಾಯಿಕ ಸಂಭ್ರಮ – ಮಕ್ಕಳು ಸಮಾಜ ಆಸ್ತಿಯಾಗಲಿ : ಶ್ರೀ ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ ಜಿಲ್ಲೆಯ ಮುಧೋಳ : ಇಂದಿನ ನಮ್ಮ ಮಕ್ಕಳಿಗೆ ನೈತಿಕ ಸಂಸ್ಕಾರವನ್ನು ಕೊಡುವುದರೊಂದಿಗೆ ನಾಡಿನ ಆಸ್ತಿಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು. ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಶಿರೋಳದ ಮಾಣಿಕ್ಯಶೆಟ್ಟಿ ಕುಟುಂಬದ ಸಂಗಪ್ಪ ಹಾಗೂ ಗಿರೀಶ್ ಸಹೋದರರ ಮಹಾಮನೆಯಲ್ಲಿ ಮರೆಗುದ್ದಿಯ ಅಡವಿ ಸಿದ್ದೇಶ್ವರ ಮಠದ ಡಾ.ಶ್ರೀನಿರುಪಾದಧೀಶ್ವರ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನಡೆದ ಉಡದಟ್ಟಿ ಉತ್ಸವದಲ್ಲಿ ಭಾಗವಹಿಸಿ ಸಾಂಪ್ರದಾಯಿಕ ಸಂಭ್ರಮದಲ್ಲಿ ಮಾತನಾಡಿದರು. ಸಂಭ್ರಮದಲ್ಲಿ ಮಿಂದೆದ್ದ ಮಾಣಿಕ್ಯಶೆಟ್ಟಿ ಕುಟುಂಬವು ಹಲವು ಭಾಗಗಳಿಂದ ಬಂದ ಪೂಜ್ಯರನ್ನು ಆದರದಿಂದ ಗೌರವಿಸಿ ಪಾದಪೂಜೆ ಮಾಡಿಕೊಂಡು ಗೌರವಿಸಿದರು.
ಈ ಸಂದರ್ಭದಲ್ಲಿ ಅಂಜಲಿ, ಭಾಗ್ಯಶ್ರೀ, ಆನಂದ, ಆಕಾಶ, ಸಮಥ೯ ಈ ಐವರು ಮಕ್ಕಳನ್ನು ಗೌರವಿಸಿ ಮಾತನಾಡಿದ ಡಾ.ನಿರುಪಾದೀಶ್ವರರು ಶರಣು ಸಂಸ್ಕೃತಿಯಲ್ಲಿ ಬದುಕು ಸಾಗಿಸಿ ಎಂದು ಅವರು ಮೊಬೈಲ್ ಬಿಡಿ, ಪುಸ್ತಕ ಹಿಡಿ ಎಂದು ಸೂಚಿಸಿದರು. ಮುಧೋಳದ ವೆಂಕಣ್ಣ ಮಹಾರಾಜರು ,ಶಿರೋಳದ ಬಸಪ್ಪಜ್ಜ ,ಮಂಟೂರಿನ ಈರಯ್ಯ ಸ್ವಾಮೀಜಿ, ಭನಗೂಳಿಯ ನಾರಾಯಣ ಮಹಾರಾಜರು, ರಬಕವಿಯ ಹನುಮಂತ ಕೊಡಗಾನೂರ ಗುರುಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಯಮಿ ಸಂಗಮೇಶ ನಿರಾಣಿ, ಹಿರಿಯರಾದ ಶಿವಪ್ಪ ಪವಾಡಶೆಟ್ಟಿ ಪೋಲಿಸ್ ಗೌಡ , ಶಂಕರ ಚಿಮ್ಮಡ ಸೇರಿದಂತೆ ಅನೇಕರು ಶುಭ ಹಾರೈಸಿದರು.
ಬಂದವ್ವ ಸಿದ್ದರಾಮಪ್ಪ ಮಾಣಿಕ್ಯಶಟ್ಟಿ ಹಾಗೂ ಪಾರವ್ವ ಮಹಾದೇವಪ್ಪ ಮುರನೂರ ಸ್ವಾಗತಿಸಿ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!