ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾಪುರುಷರ ಭಾವಚಿತ್ರಗಳಿಗೆ ಅವಮಾನವನ್ನು ಖಂಡಿಸಿ : ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರತಿಭಟನೆ

ಕಲಬುರಗಿ/ ಕಾಳಗಿ : ತಾಲೂಕಿನ ದಲಿತ ಸೇನೆ ತಾಲೂಕ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಮಹಾಪುರುಷರ ಭಾವಚಿತ್ರಗಳಾದ ಡಾ ll ಬಿ ಆರ್ ಅಂಬೇಡ್ಕರ್, ವಿಶ್ವ ಗುರು ಬಸವಣ್ಣ, ಬಾಬು ಜಗನ್ ಜೀವನ್ ರಾಂ, ಪೆರಿಯಾರ್, ಶಾವು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ, ಗೌತಮ ಬುದ್ಧ, ಇವರ ಭಾವಚಿತ್ರಗಳಿಗೆ ದಿ. 16-04-26 ರಂದು ಬೆಳಗಿನ ಜಾವ ಕಿಡಗೇಡಿಗಳು ಸಗಣಿ ಬಳಿದು ( ಹೊಡೆದು ) ಅವಮಾನಿಸಿರುತ್ತಾರೆ. ಕೂಡಲೇ ಅವಮಾನಿಸಿದ ಕಿಡಗೇಡಿಗಳನ್ನು ಕೂಡಲೇ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ದಲಿತ ಸೇನೆ ತಾಲೂಕು ಸಮಿತಿ ಕಾಳಗಿ ತಾಲೂಕ ವತಿಯಿಂದ ಒತ್ತಾಯಿಸಿದರು. ಮಾನ್ಯರು ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಮುಂದಿನ ಕ್ರಮಕ್ಕಾಗಿ ಮಾನ್ಯ ಗ್ರೇಡ್ -2 ರಾಜೇಶ್ವರಿ ಮೇಡಂ ತಹಶೀಲ್ದಾರರು ಕಾಳಗಿ ರವರ ಮುಖಂತರ ಮಾನ್ಯ ಮುಖ್ಯಮಂತ್ರಿ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಖತಲಪ್ಪ ಅಂಕನ ದಲಿತ ಸೇನೆ . ಕಾ ಅಧ್ಯಕ್ಷರು, ಜೈ ಭೀಮ್ ಹೊಳ್ಕರ ಪ್ರ . ಕಾ. ಕಾಳಗಿ, ರಮೇಶ್ ಕುಡ್ದಹಳ್ಳಿ ಸಮಾಜ ಜಾಲತಾಣ ಅಧ್ಯಕ್ಷರು , ಮಾರುತಿ ತೆಗಲತಿಪ್ಪಿ ಕಾರ್ಯಾಧ್ಯಕ್ಷರು, ಅನಿಲ್ ಗಂಜಗೆರಾ ವಿ. ಒ. ಅಧ್ಯಕ್ಷರು, ತುಕಾರಾಂ ಗಂಜಗೇರಾ ಖಜಾಂಚಿ, ಖಾಲೀದ ಖುರೇಷಿ ನ. ಘ. ಅಧ್ಯಕ್ಷರು, ಖತಲಪ್ಪ ವಜ್ಜರ್ ಗಾವ್ ದ. ಸೇ. ಮುಖಂಡರು, ರಾಮಚಂದ್ರ ಹೊಸಳ್ಳಿ ಪ್ರ. ಕಾರ್ಯದರ್ಶಿ ಸೇರಿದಂತೆ ಇತರರು ಭಾಗವಹಿಸಿದರು.

ವರದಿ ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!