
ಸಮಾಜ ಸೇವೆಗೆ ಎಲ್ಲರೂ ಮುಂದಾಗಬೇಕು : ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.
ಕಲಬುರಗಿ : ಶಹಾಬಾದ : ತಾಲೂಕಿನ ರಾವೂರ ಗ್ರಾಮದ ಮ.ನಿ.ಪ್ರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ 34ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಅತ್ಯಂತ ಶ್ಲಾಘನೀಯವಾದ ನಿರ್ಧಾರ. ಕೇವಲ ವೈಯಕ್ತಿಕ ಆಚರಣೆಗಿಂತ ನೊಂದವರ ಮತ್ತು ಅಗತ್ಯವಿರುವವರ ಸೇವೆ ಮಾಡುವ ಮೂಲಕ ಗುರುಗಳ ಮೇಲಿನ ಭಕ್ತಿಯನ್ನು ಸಾರ್ಥಕಗೊಳಿಸಬಹುದು.
ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮುದಾಯದ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಕೆಲವು ಪ್ರಮುಖ ಸಮಾಜಮುಖಿ ಸೇವೆ “ಸೇವೆಯೇ ಪರಮ ಧರ್ಮ”
ಶಹಾಬಾದ ತಾಲೂಕು ರಾವೂರ ಗ್ರಾಮದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅವರ ೩೪ನೇ ವರ್ಷದ ಜನ್ಮದಿನದ ಅಂಗವಾಗಿ ನೂರಕ್ಕೂ ಹೆಚ್ಚು
ಕಟ್ಟಡ ಕಾರ್ಮಿಕರಿಗಾಗಿ “ಉಚಿತ ಕ್ಷೌರ ಸೇವೆ ಮತ್ತು ಸ್ವಚ್ಛತಾ ಶಿಬಿರ” ಕಟ್ಟಡ ಕಾರ್ಮಿಕ ಬಂಧುಗಳ ಆರೋಗ್ಯದ ದೃಷ್ಟಿಯಿಂದ, ಪೂಜ್ಯರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಈ ವಿಶೇಷ ಜನಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ.
ಸ್ಥಳ: ಜನಪ್ರಿಯ ಹೇರ್ ಸಲೂನ್ ನಾಲವಾರದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಕ್ಷೌರ ಸೇವೆ
ವಿಶೇಷತೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತಮ್ಮ ವೃತ್ತಿಪರವಾಗಿ ಉಚಿತ ಕ್ಷೌರ ಸೇವೆಯಲ್ಲಿ ಜನ್ಮದಿನವನ್ನು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ. ಈ ನಿಟ್ಟಿನಲ್ಲಿ ಪೂಜ್ಯರ ಜನ್ಮದಿನದ ನಿಮಿತ್ತ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ವಿವಿಧ ಕ್ಷೇತ್ರದಲ್ಲಿ (ಕಡೆಯಲ್ಲೂ) ಈ ರೀತಿಯ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಹೀಗೆ 1950 ಕ್ಕೊ ಹೆಚ್ಚು ಅನಾಥರಿಗೆ ಉಚಿತ ಕ್ಷೌರ ಸೇವೆ ವಿತರಣೆ ಕಾರ್ಯಕ್ರಮ ನಮ್ಮ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥಿ ಸಮಾಜದ ಸೇವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಹಡಪದ ಸಮಾಜದ ಪದಾಧಿಕಾರಿಗಳು ಮತ್ತು ರಾವೂರ ಗ್ರಾಮದ ಮಹಾದೇವ ಎಸ್ ಹಡಪದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
- ಕರುನಾಡ ಕಂದ ಪತ್ರಿಕೆ




















