ಬಳ್ಳಾರಿ / ಕಂಪ್ಲಿ : ರಾಷ್ಟ್ರಮಟ್ಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂಬ ಹಕ್ಕೋತ್ತಾಯದ ಅಭಿಯಾನದ ಅಂಗವಾಗಿ ಗೋರಕ್ಷಣೆ ಪಡೆಯಿಂದ ಪಟ್ಟಣದಲ್ಲಿ ಸೋಮವಾರ ಗೋ ಸಮ್ಮಾನ್ ಮೆರವಣಿಗೆ ಜರುಗಿತು.
ಇಲ್ಲಿನ ಉದ್ಭವ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಗೋ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆ ವಾಕ್ಯಗಳೊಂದಿಗೆ ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಕೊಟ್ಟಾಲ್ ರಸ್ತೆ ಮೂಲಕ ತಹಶೀಲ್ದಾರ್ ಕಛೇರಿವರೆಗೆ ತೆರಳಿ, ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸಲ್ಲಿಸಿದರು. ನಂತರ ಗೋ ರಕ್ಷಣಾ ಪಡೆಯು ಯುವ ಮುಖಂಡ ಗೋರ್ತಿ ಶ್ರೀನಿವಾಸ ಮಾತನಾಡಿ, ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ನೀಡಿದ್ದು, ಗೋ ಸಂರಕ್ಷಣೆ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಗೋವು ಮತ್ತು ನಾವು ಎಂಬುದರ ನಡುವೆ ಭಾವದ ಕೊಂಡಿ ಇದೆ. ಗೋ ಸಂರಕ್ಷಣೆಯನ್ನು ಮಾಡುವವರಿಗೆ ರಕ್ಷಣೆ ನೀಡುವ ಕಾರ್ಯವಾಗಬೇಕು. ರಕ್ಷಿಸಿದ ಗೋವಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಪ್ರಸಾದ್, ಏನ್.ಎಮ್.ಪತ್ರಯ್ಯ ಸ್ವಾಮಿ, ಎಣ್ಣೆ ವೆಂಕಟೇಶ್, ಕಲ್ಯಾಣ ಚೌಕಿ ಮಠದ ಬಸವರಾಜ ಶಾಸ್ತ್ರಿ, ಎಸ್.ಎಂ.ಗುರುಪ್ರಸನ್ನ, ಗೋವಿಂದರಾಜು, ಡಾ.ರಾಮು, ಡಿ.ವಿ.ಸತ್ಯನಾರಾಯಣ, ಸಂತೋಷ್ಕುಮಾರ್, ಡಿ.ಸೋಮನಗೌಡ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















