ಸಿಟ್ರಿಕ್ ಆಮ್ಲದ ಕಿತ್ತಳೆ ಹಣ್ಣಿನ ತೊಳೆಗಳಲಿ
ಮೂಡಿದೆ ಸುಲಲಿತ ಚಿತ್ತಾರ ನಕ್ಷತ್ರಾಕಾರದಲಿ
ಹೊಂಗಿರಣ ಹರಡಿವೆ ದಾಳಿಂಬೆ ಕಾಳುಗಳಲಿ
ಬಣ್ಣನೆಯು ಹರದಿದೆ ಕಾವ್ಯದಾ ಸಾಲುಗಳಲಿ
ಕುತೂಹಲವ ಮೂಡಿಸಿದೆ ನಿತ್ಯ ವೀಕ್ಷಕರಲಿ
ಆಸ್ವಾದಿಸುತ ಆನಂದಿಸಲು ಕೈಂಕರ್ಯಗಳಲಿ
ಇದೋ ಬರುತಿದೆ ತಮ್ಮಲ್ಲಿಗೆ ಅತೀ ಶೀಘ್ರದಲಿ
ಕಣ್ಮನಗಳ ತಣಿಸಿಕೊಳ್ಳಲು ಶುಭ ಗಳಿಗೆಯಲಿ
- ಲಲಿತಾ ಕೆ ಆಚಾರ್ ಬೆಂಗಳೂರು




















