ಸಿರುಗುಪ್ಪ- ಇಂದಿನ ದಿನವನ್ನು ನಾವು ಸಂಭ್ರಮಿಸಬೇಕು ಸಂಬಂಧಗಳನ್ನು ಬೆಳೆಸಬೇಕು ಪ್ರೀತಿ ಬಯಸಬೇಕು ಕೆಲಸ ಮಾಡಿ ಬದುಕಬೇಕು ನಮಗಿಲ್ಲ ಗ್ಯಾರಂಟಿ ಹುಟ್ಟು ಸಾವು ನಮ್ಮ ದಿನ ಮಾನವ ಜೀವನ ಸತ್ಯ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ರಾಷ್ಟ್ರೀಯ ಸಾಕ್ಷರತಾ ಲೋಕ ಶಿಕ್ಷಣ ಶಾಂತಿ ಸಭೆ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿರುಗುಪ್ಪ ನಗರದ ಇಬ್ರಾಹಿಂ ಮಂಜಿಲ್ ನಲ್ಲಿ 95ನೇ ರಾಜಕೀಯ ಮುತ್ಸದ್ದಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಎಸ್ ಎಂ ಕೃಷ್ಣ ಅವರು 1932ರ ಮೇ 1 ರಂದು ಜನಿಸಿದ ಅವರ ನೆನಪನ್ನು ಗೌರವಿಸಿ ಸ್ಮರಿಸಿ ನಮನ ಸಲ್ಲಿಸಿ ಮಾತನಾಡುತ್ತಾ 1999 ರಿಂದ 2004ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಾಗಿ ಎಸ್ಎಂ ಕೃಷ್ಣ ಅವರು ಕಾರ್ಯ ನಿರ್ವಹಿಸಿದರು ಅವರ ಅವಧಿಯಲ್ಲಿಯೇ ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿತು ನಂತರ 2004ರ ಡಿಸೆಂಬರ್ ನಲ್ಲಿ ಮಹಾರಾಷ್ಟ್ರದ ಗವರ್ನರ್ ಆಗಿ ನೇಮಕಗೊಂಡರು 3 ವರ್ಷದ ಬಳಿಕ ಸಕ್ರಿಯ ರಾಜಕಾರಣಕ್ಕೆ ಮರಳಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು ಅವರಿಗೆ ಪದ್ಮ ವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಸ್ ಎಂ ಕೃಷ್ಣ ಅವರು 2024ರ ಡಿಸೆಂಬರ್ 10ರಂದು ನಿಧನರಾದರು ದೇಶಕ್ಕೆ ಇವರ ಕೊಡುಗೆ ಅಪಾರ ಎಂದು ಸಮಾಜ ಸುಧಾರಕ ಅಬ್ದುಲ್ ನಬಿ ವಿವರಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















