ಸಿರುಗುಪ್ಪ- ಕರ್ನಾಟಕ ಸರ್ಕಾರ 2025-26 ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಿಎಂಐಡಿಪಿ ಅಡಿಯಲ್ಲಿ ಮಂಜೂರಾದ ಕಾಮಗಾರಿ ಸಿರುಗುಪ್ಪ ನಗರದ 3ನೇ ವಾರ್ಡ್ ದೇಶನೂರು ರಸ್ತೆಯ ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನ 25 ಲಕ್ಷ ರೂ, ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗೆ ಅಡಿಗಲ್ಲನ್ನು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಮತ್ತು ತಾಲೂಕು ಗಂಗಾ ಮತಸ್ಥ ಸಂಘದ ಮುಖ್ಯಸ್ಥರು ಪದಾಧಿಕಾರಿಗಳಿಂದ ಶಾಸಕ ಬಿ ಎಂ ನಾಗರಾಜ ಅವರಿಗೆ ಸ್ವಾಗತಿಸಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಎನ್. ಕರಿಬಸಪ್ಪ, ರೈತ ಸಹಕಾರ ಸಂಘದ ಅಧ್ಯಕ್ಷರು ನಾಂಚಾರಯ್ಯ, ನಗರ ಸಭೆ ಮಾಜಿ ಅಧ್ಯಕ್ಷರು ಕೆ.ಕೃಷ್ಣ, ಮಾಜಿ ಶಾಸಕರು ಎಂ. ದೊಡ್ಡನಗೌಡ ಅವರ ಮಗ ಮರಿ ರಾಜೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ದಮ್ಮೂರು ಸೋಮಪ್ಪ, ನಗರ ಸಭೆ ಮಾಜಿ ಸದಸ್ಯರು ಪೂಜಾರಿ ಪ್ಯಾಟೆಪ್ಪ, ಗೋಪಾಲ, ಪೂಜಾರಿ ಮಲ್ಲಿಕಾರ್ಜುನ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಪದಾಧಿಕಾರಿಗಳು ತಾಲೂಕು ಗಂಗಾಮತಸ್ಥ ಅಧ್ಯಕ್ಷರು ಪದಾಧಿಕಾರಿಗಳು ಎಸ್. ಮುದುಕಪ್ಪ, ಸುಂಕಪ್ಪ, ಅಮಾಜೆಪ್ಪ,ಅನ್ಸಾರಿ ಇಸಾಕ್, ಸಲ್ವಾತ್ ಉದ್ದೀನ್, ಕಾಯಿಪಲ್ಲೆ ಆರ್.ನಾಗರಾಜ, ಬಿ.ವೆಂಕಟೇಶ್, ಹೆಚ್.ಗಣೇಶ್, ದೇಶನೂರ್ ನಾಗರಾಜ್, ಮೀರ್ ಹುಸೇನ್, ಎಸ್.ಮೋದಿನ್, ಚಿದಾನಂದ ರಾಯುಡು, ಜಾಜಿ ರಾಮಣ್ಣ, ಮುಲ್ಲಾ ದಾದಾ ಖಲಂದರ್, ಪರಶುರಾಮ್ ನಗರ ಸಭೆ ಪೌರಾಯುಕ್ತ ಗಂಗಾಧರ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಕಾಂತರಾಜ್, ಗುತ್ತಿಗೆದಾರ ಪ್ರಹಲ್ಲಾದ ರೆಡ್ಡಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ


















