ಬಸವಕಲ್ಯಾಣ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಲೇ ಇದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (2020 ರ ವಿಧಾನಸಭೆಯ ವಿಧೇಯಕ ಸಂಖ್ಯೆ-69) ಸರಕಾರದ ಆದೇಶವಿದ್ದರೂ ಕೂಡಾ ಸರಕಾರದ ಆದೇಶವನ್ನು ಗಾಳಿಗೆ ತೂರಿ ಗೋ ಹತ್ಯೆ ನಿರಂತರವಾಗಿ ನಡೆಯುತ್ತಲೆ ಇದೆ, ಹಿಂದೂ ಸಂಪ್ರದಾಯದ ಪ್ರಕಾರ ಗೋವನ್ನು 33 ಕೋಟಿ ದೇವಾನುದೇವತೆಗಳ ಸಮಾನವೆಂದು ಪೂಜಿಸಿ, ಆರಾಧಿಸುವ ಸಂಸ್ಕೃತಿ ನಮ್ಮದು ಗೋ ಹತ್ಯೆಯಿಂದ ಹಿಂದೂಗಳ ಭಾವನೆಗೆ ಅಪಾರವಾದ ಹಾನಿಯಾಗುತ್ತಿದ್ದು ಮತ್ತು ನಮ್ಮ ಅಸ್ಮಿತೆಗೆ ಧಕ್ಕೆಯಾಗುತ್ತಿದೆ.
ಆದ ಕಾರಣ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಯಾಗದಂತೆ ಸರಕಾರದ ಕಟ್ಟು ನಿಟ್ಟಿನ ಆದೇಶವನ್ನು ಪೋಲಿಸ್ ಇಲಾಖೆಯವರಿಗೆ, ಸಾರಿಗೆ ಇಲಾಖೆಯವರಿಗೆ, ಇನ್ನು ಸಂಬಂಧಪಟ್ಟಂತಹ ಇಲಾಖೆಯವರಿಗೆ ತಾವು ಆದೇಶವನ್ನು ಮಾಡಬೇಕು. ತಮ್ಮ ಮತ್ತು ಸರಕಾರದ ಆದೇಶವನ್ನು ಪಾಲಿಸದ ಗೋ ಹಂತಕರಿಗೆ ಕಾನೂನಿನ ಪ್ರಕಾರ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ನಮ್ಮ ಅಸ್ಥಿತಿಯ ಸಂಕೇತವಾದ ತಾಯಿ ಸ್ವರೂಪಿ ಗೋ ಮಾತೆಯ ರಕ್ಷಣೆಗೆ ತಾವು ಪ್ರಮುಖ ಕೇಂದ್ರಗಳಲ್ಲಿ ಪರಿಶಿಲನಾ ತಂಡವನ್ನು ನೇಮಿಸಿ ಪೋಲಿಸ್ ಇಲಾಖೆಯಿಂದ ಚೆಕ್ ಪೊಸ್ಟ್ ನಿರ್ಮಾಣ ಮಾಡಬೇಕು ಮತ್ತು ಬರುವ ಮೇ 29 ರವರೆಗೆ ಗೋ ಮಾರಾಟವನ್ನು ಮತ್ತು ಜಾನುವಾರ ಸಂತೆಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು, ಮತ್ತು ಕಾನೂನಿನ ಅಡಿಯಲ್ಲಿ ಗೋ ರಕ್ಷಕರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕೆಂದು ಬಸವಕಲ್ಯಾಣ ತಾಲೂಕಿನ ಸಹಾಯಕ ಆಯುಕ್ತರಾದ ಶ್ರೀ ಪ್ರಕಾಶ ಕುದರಿ ರವರಿಗೆ ಇಂದು ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷರಾದ ಶ್ರೀ ಶ್ರೀಶೈಲ್ ವಾತಡೆ , ಗೋರಕ್ಷಾ ಪ್ರಮುಖರಾದ ವಿನೋದ ಬಡಗೇಕರ್ , ಸಾಮಾಜಿಕ ಹೋರಾಟಗಾರ ಶ್ರೀ ಲೋಕೇಶ ಮೋಳಕೇರೆ, ಲೋಕೇಶ ಜಮಖಂಡೆ, ಹಾಗೂ ಇತರರು ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















