ಬಾಗಲಕೋಟೆ -ಮುಧೋಳ : ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ ಪಕ್ಷದ ಬುನಾದಿಯನ್ನು ಗಟ್ಟಿಗೊಳಿಸಿದ ಹಿಂದುಳಿದ ವರ್ಗದ ಧೀಮಂತ ನಾಯಕ ಆರ್.ಬಿ. ತಿಮ್ಮಾಪುರ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನವನ್ನು ಜೊತೆಗೆ ಪ್ರಬಲವಾದ ಖಾತೆಯನ್ನು ನೀಡಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ರಾಜ್ಯದ ಮುಖಂಡರು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು ಒತ್ತಾಯಿಸಿದ್ದಾರೆ. ಸೋತಾಗ ಹಿಂಜರಿಯಲಿಲ್ಲ. ಗೆದ್ದಾಗ ಅಹಂಕರಿಸಲಿಲ್ಲ ಸರಳತೆಯಿಂದ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತ ಬಂದಿರುವ ತಿಮ್ಮಪೂರ್ ಅವರಿಗೆ ಸ್ಥಾನಮಾನವನ್ನು ಕೊಡಲೇಬೇಕೆಂದು ಆಗ್ರಹಿಸಿದ ಅವರು ನಿರ್ಲಕ್ಷಿಸಿದರೆ ಕಾಂಗ್ರೆಸ್ ಪಕ್ಷ ಅವನತಿ ಹೊಂದುವುದರಲ್ಲಿ ಸಂದೇಹ ಇಲ್ಲ ಎಂದರು.
- ಕರುನಾಡ ಕಂದ ಸುದ್ದಿ




















